Advertisement

ಬೆಳ್ತಂಗಡಿ: ಮಗನ‌ನ್ನು ರಕ್ಷಿಸಲು ಹೋಗಿ ನದಿ ನೀರಿಗೆ ಬಿದ್ದು ತಂದೆ ಸಾವು

10:15 PM May 15, 2023 | Team Udayavani |

ಬೆಳ್ತಂಗಡಿ: ಧರ್ಮಸ್ಥಳ ಸಮೀಪದ ನೇತ್ರಾವತಿ ನದಿ ನೀರಿನಲ್ಲಿ ಮುಳುಗುತ್ತಿದ್ದ ಮಗನನ್ನು ರಕ್ಷಿಸಲು ಹೋಗಿ ತಂದೆಯೋರ್ವರು ನೀರಿನಲ್ಲಿ ಮುಳುಗಿ ಮೃತಟ್ಟ ಘಟನೆ ಸೋಮವಾರ ನಡೆದಿದೆ.

Advertisement

ಹಾಸನದ ಹರಳಹಳ್ಳಿಯ ಕೃಷ್ಣಪ್ಪ ಗೌಡ ಎಚ್‌.ಟಿ. (52) ತನ್ನ ಪತ್ನಿ ಮಗನೊಂದಿಗೆ ನೇತ್ರಾವತಿ ನದಿಯಲ್ಲಿ ಸ್ನಾನಕ್ಕೆ ಇಳಿದಿದ್ದರು. ಈ ವೇಳೆ ಪತ್ನಿ ಹಾಗೂ ಮಗನಿಗೆ ನೀರಿನಿಂದ ಮೇಲೆ ಬರಲಾಗದೆ ಚಡಪಡಿಸುತ್ತಿದ್ದರು. ಅವರನ್ನು ಮೇಲೆಳೆದು ಅವರ ಪ್ರಾಣ ರಕ್ಷಿಸಿದ ಕೃಷ್ಣಪ್ಪ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ. ಘಟನೆ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಮೃತದೇಹವನ್ನು ನದಿಯಿಂದ ಮೇಲೆತ್ತಲು ವಿಪತ್ತು ನಿರ್ವಹಣ ತಂಡದ ಸದಸ್ಯರು ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next