Advertisement

Ballary: ವಿದ್ಯಾರ್ಥಿನಿ ಅಪಹರಿಸಿ ಸಾಮೂಹಿಕ

10:56 PM Oct 14, 2023 | Team Udayavani |

ಬಳ್ಳಾರಿ: ಅಣ್ಣ ಕರೆಯುತ್ತಿದ್ದಾನೆಂದು ಸುಳ್ಳು ಹೇಳಿ ಕಾಲೇಜಿನಿಂದ ಬಿ.ಕಾಂ. ವಿದ್ಯಾರ್ಥಿನಿಯೊಬ್ಬಳನ್ನು ಆಟೋದಲ್ಲಿ ಕರೆದೊಯ್ದ ನಾಲ್ವರು ಯುವಕರು, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.

Advertisement

ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಸಣಾಪುರ ಬಳಿಯ ಹೋಟೆಲ್‌ನಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಪ್ರಮುಖ ಆರೋಪಿ ನವೀನ್‌ ಎಂಬವನನ್ನು ಬಂಧಿಸಲಾಗಿದೆ. ಉಳಿದ ಮೂವರು ಆರೋಪಿಗಳ ಬಂಧನಕ್ಕೆ ಶೋಧ ಮುಂದುವರಿದಿದೆ  ಎಂದು ಎಸ್‌ಪಿ ರಂಜಿತ್‌ ಕುಮಾರ್‌ ಬಂಡಾರು ತಿಳಿಸಿದ್ದಾರೆ.

ಪದವಿ ಕಾಲೇಜೊಂದರಲ್ಲಿ ಕಳೆದ ಅ.11ರಂದು ಮಧ್ಯಾಹ್ನ ಸಂತ್ರಸ್ತೆ ಪರೀಕ್ಷೆ ಬರೆಯುತ್ತಿದ್ದ ವೇಳೆ ಅಲ್ಲಿಗೆ ಬಂದ ಆಕೆಯ ಸ್ನೇಹಿತ ಎನ್ನಲಾದ ಆರೋಪಿ ನವೀನ್‌, ನಿಮ್ಮ ಅಣ್ಣ ಕರೆಯುತ್ತಿದ್ದಾನೆಂದು ಹೇಳಿ ಕರೆದಿದ್ದಾನೆ. ಆಕೆ ಹೊರಗೆ ಬಂದಾಗ ನಾಲ್ವರು ಯುವಕರು ಬಲವಂತವಾಗಿ ಆಟೋದಲ್ಲಿ ಕೂರಿಸಿಕೊಂಡು ಕಿಡ್ನಾಪ್‌ ಮಾಡಿದ್ದಾರೆ. ಬಳಿಕ ಸಣಾಪುರ ಬಳಿಯ ಹೊಟೇಲ್‌ನ ಕೊಠಡಿಗೆ ಕರೆದೊಯ್ದು ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದಾರೆ ಎನ್ನಲಾಗಿದೆ.

ಅಲ್ಲಿಂದ ವಾಪಸ್‌ ಬಳ್ಳಾರಿಗೆ ಬಂದ ಸಂತ್ರಸ್ತ ಯುವತಿ, ನಗರದ ಮಹಿಳಾ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಬಂಧಿತ ನವೀನ್‌ನೇ ಮುಂದೆ ನಿಂತು ಉಳಿದ ಯುವಕರೊಂದಿಗೆ ಈ ಕೃತ್ಯವೆಸಗಿದ್ದಾನೆ ಎನ್ನಲಾಗುತ್ತಿದೆ. ಈ ಯುವತಿ ಹಾಗೂ ನಾಲ್ವರು ಯುವಕರು ನಗರದ ಕೌಲ್‌ಬಜಾರ್‌ ಮೂಲದವರಾಗಿದ್ದಾರೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next