Advertisement

ಮೆಕ್ಕೆಜೋಳ ಖರೀದಿಯಲ್ಲಿ ಮಾರ್ಪಾಟು ಅಗತ್ಯ: ಕಾಂತಪ್ಪ

07:03 PM May 15, 2020 | Naveen |

ಬಳ್ಳಾರಿ: ಕೆಎಂಎಫ್‌ನಿಂದ ಮೆಕ್ಕೆಜೋಳ ಖರೀದಿಗೆ ನಿರ್ಧರಿಸಿರುವುದು ಸ್ವಾಗತಾರ್ಹ. ಆದರೆ, ಕೆಲ ಮಾರ್ಪಾಟು ಮಾಡಬೇಕಿದೆ ಎಂದು ರಾಬಕೊ ಹಾಲು ಒಕ್ಕೂಟದ ನಿರ್ದೇಶಕ ಶ್ರೀಕಾಂತಪ್ಪ ಅಭಿಪ್ರಾಯಪಟ್ಟಿದ್ದಾರೆ.

Advertisement

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸಣ್ಣ, ಅತಿ ಸಣ್ಣ ರೈತರಿಂದ 50 ಕ್ವಿಂಟಲ್‌ ಮೆಕ್ಕೆಜೋಳ ಖರೀದಿಸುವುದಾಗಿ ತಿಳಿಸಿದ್ದಾರೆ.ಆದರೆ, ಸಣ್ಣ ಅತಿ ಸಣ್ಣ ರೈತರು ಸಹ 100 ಕ್ವಿಂಟಲ್‌ ಮೆಕ್ಕೆಜೋಳ ಬೆಳೆಯುತ್ತಾರೆ. ಹೀಗಾಗಿ ಕೇವಲ 50 ಕ್ವಿಂಟಲ್‌ ಮಾತ್ರ ಖರೀದಿಸಿದರೆ ಉಳಿದ 50 ಕ್ವಿಂ. ಮಾರಲು ರೈತ ಎಲ್ಲಿ ಹೋಗಬೇಕು? ಹೀಗಾಗಿ ಸಣ್ಣ, ಅತಿ ಸಣ್ಣ ರೈತರ ಪೂರ್ಣ ಮೆಕ್ಕೆಜೋಳ ಖರೀದಿಗೆ ಕ್ರಮ ವಹಿಸಬೇಕು ಎಂದು ಅವರು ಹೇಳಿದ್ದಾರೆ.

ಇನ್ನು ಮೆಕ್ಕೆಜೋಳ ಮಾರುವ ರೈತ ನಿರ್ದಿಷ್ಟ ನಗರಕ್ಕೆ ಹೋಗಬೇಕು. ಬಳ್ಳಾರಿ ರೈತರು ಧಾರವಾಡಕ್ಕೆ ಹೋಗಬೇಕಿದೆ. ಇದು ಕಷ್ಟ ಆಗಲಿದೆ ಎಂದು ಅವರು ತಿಳಿಸಿದ್ದಾರೆ. ಹೀಗಾಗಿ ಕೆಎಂಎಫ್‌ನಿಂದ ಮೆಕ್ಕೆಜೋಳ ಖರೀದಿಗೆ ಪ್ರತಿ ಜಿಲ್ಲೆಯಲ್ಲಿ ಕೇಂದ್ರ ತೆರೆಯಬೇಕು. ಜೊತೆಗೆ ಚಿಕ್ಕ, ದೊಡ್ಡ ರೈತ ಎಂದು ಬೇಧ ಭಾವ ಮಾಡದೆ ಎಲ್ಲರಿಂದಲೂ ಮೆಕ್ಕೆಜೋಳ ಖರೀದಿಸಬೇಕು. ಈ ಕುರಿತು ಈಗಾಗಲೇ ರಾಬಕೊ ಅಧ್ಯಕ್ಷ, ಕೆಎಂಎಫ್‌ ನಿರ್ದೇಶಕ, ಶಾಸಕ ಭೀಮಾನಾಯ್ಕ, ಹೂವಿನ ಹಡಗಲಿ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕರ ಗಮನ ಸೆಳೆಯಲಾಗಿದೆ. ಶಾಸಕರು, ಕೆಎಂಎಫ್‌ ಅಧ್ಯಕ್ಷರು ಈ ಕುರಿತು ನಿರ್ಣಯ ಕೈಗೊಂಡು, ಶೀಘ್ರ ಎಲ್ಲಾ ಜಿಲ್ಲಾ ಕೇಂದ್ರ ಅಥವಾ ಅತಿ ಹೆಚ್ಚು ಮೆಕ್ಕೆಜೋಳ ಬೆಳೆಯುವ ಪ್ರದೇಶದಲ್ಲಿ ಖರೀದಿ ಕೇಂದ್ರ ತೆರೆಯಬೇಕು ಎಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next