Advertisement

ಕಂಪ್ಲಿಯ ಮಾರುತಿ ನಗರ ಇನ್ನು ಕಂಟೈನ್ಮೆಂಟ್‌ ಮುಕ್ತ

04:17 PM Jun 08, 2020 | Naveen |

ಬಳ್ಳಾರಿ: ಕೋವಿಡ್ ಸೋಂಕು ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಜಿಲ್ಲೆಯ ಕಂಪ್ಲಿ ಪಟ್ಟಣದ ಮಾರುತಿ ನಗರ ಪ್ರದೇಶವನ್ನು ಕಂಟೈನ್ಮೆಂಟ್‌ ಪ್ರದೇಶವೆಂದು ಗುರುತಿಸಿ ನೀಡಿದ್ದ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ತಿಳಿಸಿದ್ದಾರೆ.

Advertisement

ಕಂಪ್ಲಿ ಮಾರುತಿ ನಗರದ ವ್ಯಕ್ತಿ ಪಿ-863 ಅವರಿಗೆ ಮೇ 11ರಂದು ಸೋಂಕು ಕಾಣಿಸಿಕೊಂಡ ಬಳಿಕ 28 ದಿನಗಳ ಅವಧಿಯಲ್ಲಿ ಈ ಪ್ರದೇಶದಲ್ಲಿ ಬೇರೆ ಯಾರಿಗೂ ಕೋವಿಡ್ ಸೋಂಕು ಆವರಿಸಿಲ್ಲ. ಈ ಹಿನ್ನೆಲೆಯಲ್ಲಿ ಜೂನ್‌ 8ರಿಂದ ಮಾರುತಿ ನಗರ ಪ್ರದೇಶ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಕಂಟೈನ್ಮೆಂಟ್‌ ಮುಕ್ತ ಎಂದು ಘೋಷಿಸಲಾಗಿದೆ ಎಂದವರು ಆದೇಶದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next