Advertisement

Bellary; ಬುಡಾ ಬಗ್ಗೆ ಲೋಕಾಯುಕ್ತಕ್ಕೆ ದೂರು ಕೊಡುತ್ತೇನೆ: ಎನ್.ಪ್ರತಾಪ ರೆಡ್ಡಿ

11:40 AM Jul 06, 2024 | Team Udayavani |

ಬಳ್ಳಾರಿ: ಕಳೆದ ಒಂದೂವರೆ ವರ್ಷದಿಂದ ಬುಡಾದಲ್ಲಿ ಆಗಿರುವ ನಡವಳಿಕೆಗಳನ್ನು ತನಿಖೆ ಮಾಡಬೇಕು. ಈ ಕುರಿತು ಲೋಕಾಯುಕ್ತಕ್ಕೆ ದೂರು ಕೊಡುತ್ತೇನೆ. ಈ ಬಗ್ಗೆ ಸಮಿತಿ ಕಳಿಸಿ ತನಿಖೆ ನಡೆಸಬೇಕು ಎಂದು ಬುಡಾ ಮಾಜಿ ಅಧ್ಯಕ್ಷ, ಎಂಎಲ್ ಸಿ ಪರಾಜಿತ ಅಭ್ಯರ್ಥಿ ಎನ್.ಪ್ರತಾಪ ರೆಡ್ಡಿ ಆಗ್ರಹಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈವೆರಗೆ ಎರಡು ದೂರುಗಳನ್ನು ಕೊಟ್ಟಿದ್ದೇನೆ. ಆಗಿನ ಡಿಸಿ ಮತ್ತು ಎಸ್ಪಿ ಮೇಲೆ ದೂರು ಕೊಟ್ಟಿದ್ದೇನೆ. ಲೋಕಾಯುಕ್ತದಲ್ಲಿ ದೂರುಗಳು ನೆನೆಗುದಿಗೆ ಬಿದ್ದಿವೆ. ಬುಡಾ ಆಯುಕ್ತ ರಮೇಶ್ ಅವರಿಂದ ಲೋಕಾಯುಕ್ತಕ್ಕೆ ತಪ್ಪು ಮಾಹಿತಿ ನೀಡಲಾಗಿದೆ. ರಮೇಶ್ 12 ಜನ ಪಿಎಗಳನ್ನು ಇಟ್ಟುಕೊಂಡು ಕೆಲಸ ಮಾಡಿದ್ದಾರೆಂಬ ಆರೋಪಿಸಿದ್ದಾರೆ.

ಮೂರು ದಿನ ಗದಗದಲ್ಲಿ ಕೆಲಸ, ಮೂರು ದಿನ ಬಳ್ಳಾರಿಯಲ್ಲಿ ಕೆಲಸ, ಹೊಸಪೇಟೆಯಲ್ಲಿ ಮನೆ, ಏನು ಕೆಲಸ ಮಾಡ್ತಾರೆ.? ಒಂದು ಮೀಟಿಂಗ್ ನಲ್ಲಿ 30-40 ವಿಷಯ ಚರ್ಚೆಗೆ ತರುತ್ತಾರೆ. ಸಭೆಗಳನ್ನು ನಿಯಮ ಪ್ರಕಾರ ನಡೆಸದೆ ನಿಯಮ ಬಾಹಿರವಾಗಿ ನಡೆಸಿದ್ದಾರೆ. ಎರಡು ರೆಜುಲೇಷನ್ ಮಾಡುತ್ತಾರೆ, ಒಂದು ಸಾರ್ವಜನಿಕರಿಗೆ ಮತ್ತೊಂದು ತಮಗೆ ಇಟ್ಟುಕೊಳ್ತಾರೆ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next