Advertisement

Bellary: ಮೊದಲ ಬಾರಿಗೆ ಜೈಲಿನಿಂದ‌ ಅಭಿಮಾನಿಗಳಿಗೆ ಸಂದೇಶ ಕೊಟ್ಟ ದರ್ಶನ್

03:08 PM Oct 10, 2024 | Team Udayavani |

ಬಳ್ಳಾರಿ: ಇಲ್ಲಿನ ಕೇಂದ್ರ ಕಾರಾಗೃಹದಲ್ಲಿರುವ ಕೊಲೆ ಆರೋಪಿ ದರ್ಶನ್ (Darshan) ಅವರನ್ನು ಖ್ಯಾತ ಸಂಗೀತ ನಿರ್ದೇಶಕ ಹರಿಕೃಷ್ಣ (Harikrishna) ಮತ್ತು ನಿರ್ಮಾಪಕಿ ಶೈಲಜಾನಾಗ್ (Shylaja Nag) ಭೇಟಿ ಮಾಡಿದರು.

Advertisement

ಸುಮಾರು ಇಪ್ಪತ್ತು ನಿಮಿಷಗಳ ಕಾಲ ದರ್ಶನ್ ಜೊತೆಗೆ ಇವರು ಮಾತನಾಡಿದರು.

ದರ್ಶನ್ ಹರಿಕೃಷ್ಣ ಆಪ್ತ ಸ್ನೇಹಿತರು. ದರ್ಶನ್ ಅವರ ಹಲವು ಸಿನಿಮಾಕ್ಕೆ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಹರಿಕೃಷ್ಣ ದರ್ಶನ್ ಆರೋಗ್ಯ ವಿಚಾರಣೆ ಮಾಡಿದರು. ಶೀಘ್ರದಲ್ಲೇ ಜಾಮೀನು ಸಿಗುತ್ತದೆ ಎನ್ನುವ ಆತ್ಮಸ್ಥೈರ್ಯ ತುಂಬಿದರು. ದರ್ಶನ್ ಭೇಟಿ ಮಾಡಿ 20 ನಿಮಿಷಗಳ ಬಳಿಕ ಹರಿಕೃಷ್ಣ ಮತ್ತು ಶೈಲಜಾ ನಾಗ್ ಹೊರನಡೆದರು.

ಅಭಿಮಾನಿಗಳಿಗೆ ಸಂದೇಶ

ಇದೇ ವೇಳೆ ಆಪ್ತರನ್ನು ಭೇಟಿಯಾಗಲು ಸಂದರ್ಶಕರ ಕೊಠಡಿಗೆ ಬರುತ್ತಿದ್ದ ದರ್ಶನ್, ಎದೆ ಮುಟ್ಟಿ ಅಭಿಮಾನಿಗಳತ್ತ ಕೈ ತೋರಿಸಿದರು. ಅಭಿಮಾನಿಗಳೇ ನೀವು ನನ್ನ ಹೃದಯದಲ್ಲಿದ್ದೀರಿ ಎಂದು ದರ್ಶನ್ ಸೂಚಿಸಿದರು. ಎದೆ ಮುಟ್ಟಿ ಅಭಿಮಾನಿಗಳಿಗೆ ಬೆರಳು ತೋರಿಸಿದರು. ಅಭಿಮಾನಿಗಳು ದರ್ಶನ್ ಪರ ಘೋಷಣೆ ಕೂಗಿದರು. ಅಭಿಮಾನಿಗಳ ಕೂಗು ಕೇಳಿಸಿಕೊಂಡು ದರ್ಶನ್ ನಗುಮುಖ ತೋರಿದರು.

Advertisement

ಇದೇ ಮೊದಲ ಬಾರಿಗೆ ಜೈಲಿನೊಳಗೆ ಅಭಿಮಾನಿಗಳಿಗೆ ದರ್ಶನ್ ಸಂದೇಶ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next