Advertisement

ಬಳ್ಳಾರಿ: ಚಿರತೆ ಪ್ರತ್ಯಕ್ಷ ರೈತರಲ್ಲಿ ಆತಂಕ

08:16 AM Jul 13, 2017 | Team Udayavani |

ಬಳ್ಳಾರಿ: ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿಯ ಕಡ್ಡಿರಾಂಪುರದ ಉದ್ದನಪ್ಪ ಎಂಬುವವರ ತೋಟದ ಬಳಿ ಬುಧವಾರ ತಡರಾತ್ರಿ ಚಿರತೆಯೊಂದು ಕಾಣಿಸಿಕೊಂಡಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

Advertisement

ರೈತ ಉದ್ದಪ್ಪನ ಎಂಬುವವರ ತೋಟದ ಬಂಡೆಯಲ್ಲಿ ಕಾಣಿಸಿಕೊಂಡ ಚಿರತೆ  3 ಗಂಟೆಗಳ ಕಾಲ ಅಲ್ಲೇ ಕುಳಿತುಕೊಂಡಿತ್ತು. ಐದು ದಿನಗಳ ಹಿಂದೆ ಅದೇ ಬಂಡೆಯ ಮೇಲೆ 2 ಚಿರತೆಗಳು ಕಾಣಿಸಿಕೊಂಡಿತ್ತು.

ಕಳೆದ ಹಲವು ದಿನಗಳಿಂದ ಚಿರತೆಗಳ ದಾಳಿ ನಿರಂತರವಾಗಿದ್ದು, ಇದರಿಂದ ರೈತರು ಆತಂಕದಲ್ಲಿ ಕಾಲ ಕಳೆಯುವಂತಾಗಿದ್ದು, ದಾಳಿ ಮಾಡುತ್ತಿರುವ ಚಿರತೆಗಳನ್ನು ಸೆರೆ ಹಿಡಿಯುವಂತೆ ರೈತರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next