Advertisement

ಬೆಳ್ಳಾರೆ : ತರಗತಿಯಲ್ಲಿ ಪಾಠ ಮಾಡುತ್ತಲೇ ಹೃದಯಾಘಾತದಿಂದ ಮದ್ರಸಾ ಶಿಕ್ಷಕ ಸಾವು

10:41 PM Jun 18, 2022 | Team Udayavani |

ಸವಣೂರು : ಬೆಳ್ಳಾರೆಯ ತಂಬಿನಮಕ್ಕಿ ನಿವಾಸಿ ರಶೀದ್‌ ಮುಸ್ಲಿಯಾರ್‌ ತಂಬಿನಮಕ್ಕಿ (51) ಹೃದಯಾಘಾತದಿಂದ ಜೂ. 18ರಂದು ಸಾವನ್ನಪ್ಪಿದರು.

Advertisement

ಜೂ. 18ರ ಮುಂಜಾನೆ ತಂಬಿನಮಕ್ಕಿ ಮನೆಯಿಂದ ಕಳಂಜ ಮಸೀದಿಗೆ ಹೋಗಿದ್ದು, ಅಲ್ಲಿ ಬೆಳಗ್ಗೆ 7.30 ಕ್ಕೆ ಮದ್ರಸಾ ತರಗತಿ ನಡೆಸುತ್ತಿರುವ ಸಂದರ್ಭದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದಿದ್ದು, ಮಾಡಾವು ಎಂಬಲ್ಲಿಗೆ ತಲುವಷ್ಟರಲ್ಲಿ ಅವರು ಮೃತಪಟ್ಟರು ಎನ್ನಲಾಗಿದೆ.

ಕಳಂಜ ಮದ್ರಸಾದ ಖತೀಬರು ಅಸೌಖ್ಯದಿಂದ ರಜೆಯಲ್ಲಿದ್ದ ಸಂದರ್ಭದಲ್ಲಿ ಮಸೀದಿ ಖತೀಬರಾಗಿ ಅವರ ಬದಲಿಗೆ ರಶೀದ್‌ ಮುಸ್ಲಿಯಾರ್‌ ಸೇವೆ ಸಲ್ಲಿಸುತ್ತಿದ್ದರು.

ಮೃತರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಇದನ್ನೂ ಓದಿ : ಎಫ್ಐಎಚ್‌ ಪ್ರೊ ಲೀಗ್‌ ಹಾಕಿ: ಆರ್ಜೆಂಟೀನಾ ವಿರುದ್ಧ ಭಾರತಕ್ಕೆ ಗೆಲುವು

Advertisement
Advertisement

Udayavani is now on Telegram. Click here to join our channel and stay updated with the latest news.

Next