Advertisement

ಬೆಳ್ಳಾರೆ : ಮಾರಾಕಾಸ್ತ್ರದಿಂದ ದಾಳಿ : ಚಿಕಿತ್ಸೆ ಫಲಿಸದೆ ಬಿಜೆಪಿ ಕಾರ್ಯಕರ್ತ ಸಾವು

12:22 AM Jul 27, 2022 | Team Udayavani |

ಬೆಳ್ಳಾರೆ : ಸುಳ್ಯ ತಾಲೂಕಿನ ಬೆಳ್ಳಾರೆ ಮಾಸ್ತಿಕಟ್ಟೆಯಲ್ಲಿ ಚಿಕನ್ ಸೆಂಟರ್ ಮಾಲಕನ ಮೇಲೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದು ಗಾಯಾಳು ಆಸ್ಪತ್ರೆಯಲ್ಲಿ ಮೃತ ಘಟನೆ ಜು.26 ರಂದು ಸಂಭವಿಸಿದೆ.

Advertisement

ಬೆಳ್ಳಾರೆ ಸಮೀಪದ ನೆಟ್ಟಾರು ನಿವಾಸಿ ಬಿಜೆಪಿ ಕಾರ್ಯಕರ್ತ ಪ್ರವೀಣ್ (29) ಮೃತಪಟ್ಟವರು. ಪೆರುವಾಜೆ ಕ್ರಾಸ್ ಬಳಿ ಪ್ರವೀಣ್ ಅವರು ಕೋಳಿ ಅಂಗಡಿ ಹೊಂದಿದ್ದು ರಾತ್ರಿ ಅಂಗಡಿ ಮುಚ್ಚುತ್ತಿರುವ ವೇಳೆ ಒಂದು ಬೈಕಿನಲ್ಲಿ ಮೂವರು ಅವರ ಮೇಲೆ ಮಾರಾಕಾಸ್ತ್ರಗಳಿಂದ ಏಕಾಏಕಿ ದಾಳಿ ಮಾಡಿದ್ದಾರೆಂದು ಸ್ಥಳೀಯರು ತಿಳಿಸಿದ್ದಾರೆ.

ಸ್ವಲ್ಪ ದೂರ ಅಟ್ಟಾಡಿಕೊಂಡು ಹೋಗಿ ಮಾರಾಕಾಯುದ್ದದಿಂದ ಯದ್ವಾತದ್ವಾ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಬೈಕ್ ಕೇರಳ ರಿಜಿಸ್ಟ್ರೇಷನ್ ಹೊಂದಿತ್ತು ಎಂಬ ವದಂತಿ ಸ್ಥಳೀಯವಾಗಿ ಹಬ್ಬಿದ್ದು ಖಚಿತಗೊಂಡಿಲ್ಲ.

ಒಂದು ವಾರದ ಹಿಂದೆ ಬೆಳ್ಳಾರೆ ಸಮೀಪದ ಕಳಂಜದಲ್ಲಿ ಮಸೂದ್ ಎಂಬ ಯುವಕನ ಬರ್ಬರ ಕೊಲೆಯಾಗಿತ್ತು. ಅದಾದ ವಾರದೊಳಗೆ ಪ್ರವೀಣ್ ಕೊಲೆಯಾಗಿದೆ.

ಇದನ್ನೂ ಓದಿ : ಸೋನಿಯಾ ಗಾಂಧಿ ವಿಚಾರಣೆ ವಿರುದ್ಧ ಸಿಡಿದ ಕೈ: ರಾಹುಲ್‌ ಸೇರಿ 50ಕ್ಕೂ ಹೆಚ್ಚು ಸಂಸದರು ವಶಕ್ಕೆ

Advertisement
Advertisement

Udayavani is now on Telegram. Click here to join our channel and stay updated with the latest news.

Next