Advertisement

ಏಕಾಏಕಿ ಕ್ಯಾನ್ಸಲ್ ಆದ ಬೆಳಗಾವಿ-ತಿರುಪತಿ ವಿಮಾನ : ಪ್ರಯಾಣಿಕರ ಆಕ್ರೋಶ

10:38 PM Oct 14, 2022 | Team Udayavani |

ಬೆಳಗಾವಿ : ಬೆಳಗಾವಿ-ತಿರುಪತಿ ವಿಮಾನ ಏಕಾಏಕಿ ಕ್ಯಾನ್ಸಲ್ ಆದ ಪರಿಣಾಮ ಪ್ರಯಾಣಿಕರು ಆಕ್ರೋಶ ಹೊರ ಹಾಕಿದ ಘಟನೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸಂಜೆ ನಡೆದಿದೆ.

Advertisement

ಇಂದು‌ ಸಂಜೆ 5:55ಕ್ಕೆ ಬೆಳಗಾವಿಯಿಂದ ತಿರುಪತಿಗೆ ಹೊರಡಬೇಕಿದ್ದ ಸ್ಟಾರ್ ಏರ್ಲೈನ್ಸ್ ಒಡೆತನದ ವಿಮಾನ ಏಕಾಏಕಿ ಕ್ಯಾನ್ಸಲ್ ಆಗಿದೆ.

ಏರ್ಲೈನ್ಸ್ ಸಂಸ್ಥೆ ವಿರುದ್ಧ ಮೂವತ್ತಕ್ಕೂ ಅಧಿಕ ಪ್ರಯಾಣಿಕರು ಆಕ್ರೋಶ ಹೊರ ಹಾಕಿದ್ದು, ನಿಲ್ದಾಣದಲ್ಲಿರುವಕೌಂಟರ್ ನಲ್ಲಿ ಸಿಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಯಾವ ಕಾರಣಕ್ಕೆ ಏಕಾಏಕಿ ವಿಮಾನ ಕ್ಯಾನ್ಸಲ್ ಮಾಡದ್ದೀರಿ, ನಿಲ್ದಾಣಕ್ಕೆ ಬಂದ ಬಳಿಕ ಫ್ಲೈಟ್ ಕ್ಯಾನ್ಸಲ್ ಅಂತ ಹೇಳಿದ್ದೀರಿ ಎಂದು ಕಿಡಿ ಕಾರಿದರು.

ವಿಜಯಪುರ, ಬಾಗಲಕೋಟೆ, ಮಹಾರಾಷ್ಟ್ರ ಸೇರಿದಂತೆ ವಿವಿಧ ಕಡೆಯಿಂದ ಆಗಮಿಸಿರುವ ಪ್ರಯಾಣಿಕರು ತಿರುಪತಿಯಲ್ಲಿ ಈಗಾಗಲೇ ರೂಮ್ ಬುಕ್ ಮಾಡಿದ್ದರು.  ವಾಪಾಸ್ ಬರಲು ಕೂಡ ವಿಮಾನ ಟಿಕೆಟ್ ಬುಕ್ ಮಾಡಿದ್ದರು.

ವಿಮಾನ ಕ್ಯಾನ್ಸಲ್ ಮಾಡುವುದರಿಂದ ಸಾಕಷ್ಟು ನಷ್ಟವಾಗುತ್ತದೆ ಎಂದು ಪ್ರಯಾಣಿಕರ ಆಕ್ರೋಶ ಹೊರ ಹಾಕಿ,ತಿರುಪತಿಗೆ ವಿಮಾನದಲ್ಲಿ ಬಿಡಬೇಕೆಂದು ಪ್ರಯಾಣಿಕರು ಪಟ್ಟು ಹಿಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next