Advertisement
ಕೆಪಿಎಂಇ ಮಸೂದೆ ಜಾರಿ ಮಾಡಬಾರದು. ಸರಕಾರವೇ ನೇಮಿಸಿದ್ದ ನಿವೃತ್ತ ಮುಖ್ಯ ನ್ಯಾಯಮೂರ್ತಿ ವಿಕ್ರಮ್ಜಿತ್ ಸೇನ್ ಸಮಿತಿ ಸಲ್ಲಿಸಿದ ವರದಿ ಅನುಷ್ಠಾನ ಗೊಳಿಸಬೇಕು ಎಂದು ಆಗ್ರಹಿಸಿ ನ.13ರಂದು ಬೆಳಗಾವಿ ಚಲೋ ನಡೆಸಲು ಖಾಸಗಿ ವೈದ್ಯರ ಸಂಘ ತೀರ್ಮಾನಿಸಿದೆ.
Related Articles
ಉಪವಾಸ ಸತ್ಯಾಗ್ರಹ: ಸರಕಾರ ಈ ಹೋರಾಟಕ್ಕೂ ಮಣಿಯದಿದ್ದರೆ ನ. 14ರಿಂದ ಬೆಳಗಾವಿಯಲ್ಲೇ ವೈದ್ಯರ ತಂಡಗಳಿಂದ ಸರಣಿ ಉಪವಾಸ ಸತ್ಯಾಗ್ರಹ ನಡೆಸಲಾಗು ತ್ತದೆ. ಆಸಕ್ತಿ ಇರುವ ವೈದ್ಯರು ತಂಡದ ಮೂಲಕ ಪಾಲ್ಗೊಳ್ಳಲಿದ್ದಾರೆ. ಇದಕ್ಕೂ ಸ್ಪಂದಿ ಸದೆ ಕೆಪಿಎಂಇ ಮಸೂದೆಯನ್ನು ಸದನದಲ್ಲಿ ಮಂಡಿಸಿದರೆ ಹೋರಾಟ ಇನ್ನಷ್ಟು ತೀವ್ರ ಗೊಳಿಸಲು ನಿರ್ಧರಿಸಲಾಗಿದೆ. ಖಾಸಗಿ ವೈದ್ಯರು ವೈದ್ಯ ವೃತ್ತಿಯನ್ನೇ ತ್ಯಜಿಸಿ ಹೋರಾಟಕ್ಕಿಳಿಯ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
Advertisement
ಮುಖ್ಯಮಂತ್ರಿ ಭೇಟಿ: ಭಾರತೀಯ ವೈದ್ಯಕೀಯ ಸಂಘದ ನೇತೃತ್ವದ ನಿಯೋಗ ಮುಂದಿನ ಮಂಗಳವಾರ ಅಥವಾ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರನ್ನು ಭೇಟಿ ಮಾಡಿ ಕೆಪಿಎಂಇ ಮಸೂದೆಯನ್ನು ತಡೆಹಿಡಿಯಬೇಕೆಂದು ಮನವಿ ಮಾಡಲು ಸಭೆ ನಿರ್ಧರಿಸಿತು.
ಪ್ರಮುಖ ಐದು ನಿರ್ಧಾರಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯರಿಗೆ ನಿಯಂತ್ರಣ ಹೇರುವ ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮಸೂದೆ (ಕೆಪಿಎಂಇ)-2017 ವಿಚಾರದಲ್ಲಿ ಸಂಘದ ಸಭೆಯಲ್ಲಿ ಐದು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. 1. ಮುಖ್ಯಮಂತ್ರಿ, ಆರೋಗ್ಯ ಸಚಿವರನ್ನು ಭೇಟಿ ಮಾಡಿ ಸದನದಲ್ಲಿ ಮಸೂದೆ ಮಂಡಿಸದಂತೆ ಮನವಿ.
2. ಇದಕ್ಕೆ ಒಪ್ಪದಿದ್ದಲ್ಲಿ ನ. 13ರಂದು ಹೊರರೋಗಿಗಳ ಸೇವೆ ಸ್ಥಗಿತಗೊಳಿಸಿ ಬೆಳಗಾವಿ ಚಲೋ.
3. ಅದಕ್ಕೂ ಸರಕಾರ ಮಣಿಯದಿದ್ದರೆ ನ. 14ರಿಂದ ವೈದ್ಯರ ತಂಡದಿಂದ ಉಪವಾಸ ಸತ್ಯಾಗ್ರಹ.
4. ಎಲ್ಲವನ್ನೂ ಮೀರಿ ಸರಕಾರ ಮಸೂದೆಗೆ ಕಾಯ್ದೆ ರೂಪ ನೀಡಿದರೆ ವೈದ್ಯ ವೃತ್ತಿ ತ್ಯಜಿಸುವುದು.
5. ಕಾಯ್ದೆ ಜಾರಿಯಾಗದಂತೆ ನೋಡಿಕೊಳ್ಳಲು ಬೇರೆ ಮಾರ್ಗೋ ಪಾಯ ಹುಡುಕುವುದು.