Advertisement

Belapu: ರೈಲ್ವೇ ಹಳಿ ಬಳಿ ಬಿದ್ದು ಸಾವು

07:32 PM Mar 28, 2024 | Team Udayavani |

ಶಿರ್ವ: ಬೆಳಪು ಗ್ರಾಮದ ಮಹಮ್ಮದ್‌ ಅಬ್ಬಾಸ್‌ (72) ಅವರು ಬೆಳಪು ಗ್ರಾಮದ ದರ್ಗಾದ ಬಳಿ ಹಾದುಹೋಗಿರುವ ರೈಲ್ವೇ ಹಳಿಯ ಪಶ್ಚಿಮ ಬದಿಯಲ್ಲಿ ಬಿದ್ದು ತೀವ್ರ ಗಾಯಗೊಂಡು ಮಾ. 27ರಂದು ಮೃತಪಟ್ಟಿದ್ದಾರೆ.

Advertisement

ಮಾನಸಿಕ ಖನ್ನತೆಯಿಂದ ಬಳಲುತ್ತಿದ್ದ ಅವರು ಉಡುಪಿಯ ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮನೆಯಿಂದ ಹೋದವರು ಹಿಂದಿರುಗಿ ಬರುತ್ತಿರಲಿಲ್ಲ. ಬುಧವಾರ ಮಧ್ಯಾಹ್ನ ಮನೆಯಿಂದ ಹೊರಹೋಗಿದ್ದ ಅವರು ಹಿಂದಿರುಗಿ ಬಾರದೇ ಇದ್ದು, ಆಸುಪಾಸಿನಲ್ಲಿ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ.

ಪುತ್ರ ಜಾಕಿರ್‌ ಹುಸೇನ್‌ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next