Advertisement
ತೀವ್ರ ಬಿಸಿಲಿನ ಕಾರಣಕ್ಕೆ ಕೆರೆಗಳಲ್ಲಿ ನೀರು ಬತ್ತಿಹೋಗಿ ಕೃಷಿಗೆ ನೀರುಣಿಸಲು ಕಷ್ಟಕರವಾಗುತ್ತದೆ. ಹೀಗಾಗಿ, ಸುಮ್ಮನೆ ಹರಿದು ವ್ಯರ್ಥವಾಗುತ್ತಿರುವ ನೀರನ್ನು ಒಂದೆಡೆ ಶೇಖರಿಸಿಕೊಂಡು ಕೃಷಿಗೆ ಬಳಸುವ ಜತೆಗೆ ಮಣ್ಣಿನಲ್ಲಿ ನೀರು ಇಂಗಿ ಸುತ್ತಲಿನ ತೋಟವನ್ನು ಸದಾ ತಂಪಾಗಿ ಮಾಡುತ್ತಿದೆ.
ಒಂದು ಕಡೆ ಕಿಂಡಿ ಅಣೆಕಟ್ಟನ್ನು ನಿರ್ಮಿಸಿದರೆ ಆ ಪ್ರದೇಶದ ಕೆರೆ, ಬಾವಿಗಳಲ್ಲಿ ನೀರಿನ ಮಟ್ಟ ಹೆಚ್ಚಳವಾಗುತ್ತದೆ. ಅನೇಕ ಕಡೆಗಳಲ್ಲಿ ಕಿಂಡಿ ಅಣೆಕಟ್ಟು ಇದ್ದರೂ ಹಲಗೆ ಅಳವಡಿಸದೆ ಹಾಗೇ ಇಡಲಾಗುತ್ತದೆ. ಇವುಗಳ ಬಳಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಜತೆಗೆ ಸ್ಥಳೀಯಾಡಳಿತಗಳು ಇವುಗಳ ಅಭಿವೃದ್ಧಿ ಕುರಿತು ಗಮನ ಹರಿಸುವುದು ಆವಶ್ಯಕ.
Related Articles
ಉದ್ಯೋಗ ಖಾತರಿ ಯೋಜನೆಯಿಂದ ಕಿಂಡಿ ಅಣೆಕಟ್ಟು ನಿರ್ಮಿಸಬೇಕೆಂಬ ನಿರ್ದೇಶನದ ಪ್ರಕಾರ ನಾವು ಗ್ರಾ.ಪಂ.ನಿಂದ ಉದ್ಯೋಗ ಖಾತರಿ ಯೋಜನೆ ಮೂಲಕ ಕಿಂಡಿ ಅಣೆಕಟ್ಟು ನಿರ್ಮಿಸಿದ್ದೇವೆ. ಇದರಿಂದ ಸ್ಥಳೀಯ 15 ಮನೆಯವರಿಗೆ ಉಪಯೋಗವಾಗಲಿದೆ. ನೀರಿನ ಸಂರಕ್ಷಣೆಯೂ ಆಗುತ್ತದೆ.
– ಉಮೇಶ್ವರಿ ಅಗಳಿ,
ಅಧ್ಯಕ್ಷೆ, ಬೆಳಂದೂರು ಗ್ರಾ.ಪಂ.
Advertisement
ಪ್ರವೀಣ್ ಚೆನ್ನಾವರ