Advertisement

Belagavi; ಮಳೆಯ ನಡುವೆಯೂ ವಿವಾದಿತ ಕಳಸಾ ನಾಲಾ ಪ್ರದೇಶಕ್ಕೆ ಅಧಿಕಾರಿಗಳ ಭೇಟಿ

02:47 PM Jul 07, 2024 | Team Udayavani |

ಬೆಳಗಾವಿ: ಧಾರಾಕಾರ ಮಳೆಯ ನಡುವೆಯೂ ಕೇಂದ್ರದ ಪ್ರವಾಹ್ ತಂಡದ ಅಧಿಕಾರಿಗಳು ವಿವಾದಿತ ಕಳಸಾ ನಾಲಾ ಪ್ರದೇಶಕ್ಕೆ ಭೇಟಿ ನೀಡಿದರು.

Advertisement

ಬೆಳಗಾವಿ ಜಿಲ್ಲೆಯ ಮಹದಾಯಿ ಹೋರಾಟ ಸಮಿತಿಯ ತೀವ್ರ ವಿರೋಧದ ಮಧ್ಯೆಯೂ ಗೋವಾದಿಂದ ರಸ್ತೆಯ ಮೂಲಕ ಖಾನಾಪುರ ತಾಲೂಕಿನ ಕಣಕುಂಬಿ ಬಳಿಯ ಕಳಸಾ ನಾಲಾ ಪ್ರದೇಶಕ್ಕೆ ಭೆಟಿ ನೀಡಿ ಪರಿಶೀಲನೆ ನಡೆಸಿದರು.

ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಕೇಂದ್ರದ ಮಹದಾಯಿ ಪ್ರವಾಹ್ ಅಧಿಕಾರಿಗಳ ತಂಡಕ್ಕೆ ಕಳಸಾ ಬಂಡೂರಿ ಯೋಜನೆಯ ಪ್ರಸ್ತುತ ಸ್ಥಿತಿಗತಿಯ ಮಾಹಿತಿ ನೀಡಿಕೆ ನೀಡಿದರು.

ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ನಡುವೆಯೂ ಮಹದಾಯಿ ಜಲಾನಯನ ಪ್ರದೇಶಗಳಾದ ಹಳತಾರಾ ಮತ್ತು ಕಳಸಾ ನಾಲಾ ಪ್ರದೇಶಗಳ ವೀಕ್ಷಣೆ ಮಾಡಿದರು.

ಕಣಕುಂಬಿಯಲ್ಲಿನ ಸತತ ಮಳೆ ಹಾಗೂ ಜಿಗಣೆ ಕಾಟಕ್ಕೆ ಅಧಿಕಾರಿಗಳು ಹೈರಾಣಾದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next