Advertisement

ಕಾಂಗ್ರೆಸ್‌ ದುಸ್ಥಿತಿ ಅನಾವರಣ: ಅಶ್ವತ್ಥನಾರಾಯಣ

05:05 PM Oct 15, 2021 | Team Udayavani |

ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಬಗ್ಗೆ ಕಾಂಗ್ರೆಸ್‌ ನಾಯಕರೇಹೇಳಿದ್ದಾರೆ. ಹೀಗಿರುವಾಗ ನಾವುಮತ್ತೇನು ಹೇಳುವುದು ಎಂದು ಉನ್ನತಶಿಕ್ಷಣ ಸಚಿವ ಸಿ.ಎನ್‌. ಅಶ್ವತ್ಥನಾರಾಯಣ ಲೇವಡಿ ಮಾಡಿದರು.

Advertisement

ಸುದ್ದಿಗಾರರ ಜತೆಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿಅವರ ನಾಯಕರೇ ತಮ್ಮವರ ಬಗ್ಗೆ ಟೀಕೆಮಾಡುತ್ತಾರೆ ಎಂದರೆ ಪಕ್ಷದ ಸ್ಥಿತಿ ಏನಿದೆ ಎಂಬುದನ್ನು ನೀವೇ ಊಹಿಸಿಕೊಳ್ಳಿ. ಇದರ ಬಗ್ಗೆ ನಾವು ಪ್ರತ್ಯೇಕವಾಗಿ ವಿಶ್ಲೇಷಣೆ ಮಾಡುವ ಅಗತ್ಯವಿಲ್ಲ.

ಬೆಂಗಳೂರು ಉಸ್ತುವಾರಿ ಸಚಿವರುಯಾರಾಗಬೇಕು ಎಂಬುದನ್ನುಮುಖ್ಯಮಂತ್ರಿಗಳೇ ನಿರ್ಧರಿಸುತ್ತಾರೆ.ರಮೇಶ ಜಾರಕಿಹೊಳಿ ಅವರಿಗೆ ಸಚಿವಸ್ಥಾನ ನೀಡಬೇಕೆಂಬ ಬೇಡಿಕೆಗೆ ಪಕ್ಷಖಂಡಿತ ಸ್ಪಂದಿಸುತ್ತದೆ. ಸಚಿವ ಸ್ಥಾನಸಿಗದೇ ಇರುವುದಕ್ಕೆ ಬೇಸರವಾಗಿದೆ.ಇದು ಸಹಜ. ಆದರೆ ನಾವು ರಮೇಶಜಾರಕಿಹೊಳಿ ಅವರ ಜತೆಗಿದ್ದೇವೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next