Advertisement

ನೀರಸ ಮತದಾನ; ಲೆಕ್ಕಾಚಾರ ಬುಡಮೇಲು

06:08 PM Sep 05, 2021 | Team Udayavani |

ಬೆಳಗಾವಿ: ಮೊದಲ ಬಾರಿಗೆ ಪಕ್ಷದ ಚಿಹ್ನೆಮೇಲೆ ನಡೆದ ಬೆಳಗಾವಿ ಮಹಾನಗರಪಾಲಿಕೆ ಚುನಾವಣೆಗೆ ಮತದಾರರು ನೀರಸಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಅಭ್ಯರ್ಥಿಗಳುಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಸೆ.6ರಂದು ಹೊರ ಬೀಳಲಿರುವ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.

Advertisement

ಭಾಷೆಯ ಆಧಾರದ ಮೇಲೆ ನಡೆಯುತ್ತಿದ್ದಚುನಾವಣೆಯನ್ನು ಈಗ ಪಕ್ಷಗಳು ತಮ್ಮವರ್ಚಸ್ಸಿನ ಮೇಲೆ ಎದುರಿಸಿವೆ. ಪûಾಧಾರಿತಸ್ಪರ್ಧೆಯ ಮೂಲಕ ಕುತೂಹಲ ಮೂಡಿಸಿದ್ದಈ ಬಾರಿ ಚುನಾವಣೆಯಲ್ಲಿ ಮಹಾರಾಷ್ಟ್ರಏಕೀಕರಣ ಸಮಿತಿಗೆ ಪಾಠ ಕಲಿಸಲು ಎಲ್ಲ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನುಕಣಕ್ಕಿಳಿಸಿ ಅದೃಷ್ಟ ಪರೀಕ್ಷೆಗೆ ಮುಂದಾಗಿವೆ.

ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಲ್ಲಿ ಢವ ಢವ ಶುರುವಾಗಿದೆ.ಶೇ. 50 ರಷ್ಟು ಮಾತ್ರ ಮತದಾನಆಗಿದ್ದರಿಂದ ರಾಜಕೀಯ ಪಕ್ಷಗಳಲೆಕ್ಕಾಚಾರ ಉಲ್ಟಾ ಹೊಡೆದಿದೆ. ಅತಿಹೆಚ್ಚಿನ ಸ್ಥಾನಗಳನ್ನು ಗೆದ್ದು ಪಾಲಿಕೆ ಮೇಲೆತಮ್ಮ ಹಿಡಿತ ಸಾಧಿ ಸಲು ರಾಜಕೀಯಪಕ್ಷಗಳು ಫಲಿತಾಂಶದ ನಿರೀಕ್ಷೆಯಲ್ಲಿವೆ.ಹೇಗಾದರೂ ಮಾಡಿ ಈ ಬಾರಿ ತಮ್ಮ ಪಕ್ಷದವರ್ಚಸ್ಸು ಹೊಂದಿ ಎಂಇಎಸ್‌ಗೆ ಪಾಠಕಲಿಸಬೇಕೆಂಬ ಪಟ್ಟು ಹಿಡಿದಿವೆ.

ಕಾಂಗ್ರೆಸ್‌ಹಾಗೂ ಬಿಜೆಪಿ ಮಧ್ಯೆ ನೇರ ಪೈಪೋಟಿಇದ್ದು, ಶುಕ್ರವಾರ ನಡೆದ ಮತದಾನದಲೆಕ್ಕಾಚಾರದಲ್ಲಿ ತೊಡಗಿಕೊಂಡಿದ್ದಾರೆ.ಯಾವ ಮತಗಟ್ಟೆ ಕೇಂದ್ರದಲ್ಲಿ ಯಾರಿಗೆಎಷ್ಟು ಮತ ಬಿದ್ದಿರಬಹುದು ಎಂಬಲೆಕ್ಕಾಚಾರ ಹಾಕುತ್ತಿದ್ದಾರೆ. ಬಿಜೆಪಿಯವರುದಕ್ಷಿಣ ಮತ ಕ್ಷೇತ್ರದ ಬಹುತೇಕ ವಾರ್ಡುಗಳಮೇಲೆ ಕಣ್ಣು ಹಾಕಿದ್ದು, ಇತ್ತ ಉತ್ತರ ಕ್ಷೇತ್ರದಕೆಲ ವಾರ್ಡುಗಳನ್ನು ಬಾಚಿಕೊಳ್ಳಲುಮುಂದಾಗಿದೆ.

ಬಿಜೆಪಿ ಬಲಪ್ರಯೋಗ: ಎಂಇಎಸ್‌ಅಭ್ಯರ್ಥಿಗಳನ್ನು ಮಣಿಸಲು ಬಿಜೆಪಿಹೆಚ್ಚಿನ ಬಲಪ್ರಯೋಗ ನಡೆಸಿದ್ದು,ಹೆಚ್ಚೆಚ್ಚು ಮತದಾನ ಆಗಿರುವ ಬೂತ್‌ಗಳಮತದಾನ ಪ್ರಮಾಣದ ಮೇಲೆ ಲೆಕ್ಕಾಚಾರಹಾಕುತ್ತಿದೆ.ಬಿಜೆಪಿ ಮರಾಠಿ ಭಾಷಿಕರುಹೆಚ್ಚಿರುವ ವಾರ್ಡಿನಲ್ಲಿ ಜಾತಿ ಲೆಕ್ಕಾಚಾರದಲ್ಲಿತೊಡಗಿದೆ. ಮರಾಠಾ ಸಮುದಾಯದ ಜನರುಇರುವ ಪ್ರದೇಶಗಳಲ್ಲಿ ಮರಾಠಾ ಸಮುದಾಯದ ಅಭ್ಯರ್ಥಿಯನ್ನೇ ಕಣಕ್ಕಿಳಿಸುವಮೂಲಕ ಎಂಇಎಸ್‌ಗೆ ಟಾಂಗ್‌ ನೀಡಿದೆ.

Advertisement

ಕಾಂಗ್ರೆಸ್‌ನ ಲೆಕ್ಕಾಚಾರವೇ ಬೇರೆ:ಅಲ್ಪಸಂಖ್ಯಾತ ಸಮುದಾಯದ ಮತಗಳಮೇಲೆ ಕಣ್ಣಿಟ್ಟು ಹೆಚ್ಚಿನ ಸ್ಥಾನಗಳನ್ನುಗೆಲ್ಲಬೇಕೆಂಬ ಪಟ್ಟು ಹಿಡಿದಿರುವಕಾಂಗ್ರೆಸ್‌ ಗೆಲುವಿನ ಲೆಕ್ಕಾಚಾರದಲ್ಲಿತೊಡಗಿದೆ. ಅತಿ ಹೆಚ್ಚು ಸ್ಥಾನಗಳನ್ನು ಗೆದ್ದುಬೀಗಬೇಕೆಂದು ತುದಿಗಾಲಲ್ಲಿ ನಿಂತಿರುವಕಾಂಗ್ರೆಸ್‌ ನಾಯಕರು ಕಡಿಮೆ ಸ್ಥಾನಗಳುಬಂದರೂ ಪಕ್ಷೇತರರ ಬೆಂಬಲ ಪಡೆಯಲುಸಿದ್ಧರಾಗಿದ್ದಾರೆ. ಒಟ್ಟಾರೆಯಾಗಿ ಉಭಯಪಕ್ಷಗಳ ನಾಯಕರು ತಮ್ಮ ಪಕ್ಷದಬಲಾಬಲಗಳ ಮೇಲೆ ಕಣ್ಣಿಟ್ಟಿದ್ದಾರೆ.

ಪಕ್ಷೇತರರ ಮೇಲೆ ಎಲ್ಲರ ಕಣ್ಣು:ರಾಜಕೀಯ ಪಕ್ಷಗಳಿಗಿಂತ ಪಕ್ಷೇತರರೇ ಅತಿಹೆಚ್ಚು ಈ ಚುನಾವಣೆಯಲ್ಲಿ ಸ್ಪ ರ್ಧಿಸಿದ್ದಾರೆ.ನೀರಸ ಮತದಾನದಿಂದ ಪಾಲಿಕೆಯಲ್ಲಿಅತಂತ್ರ ಪರಿಸ್ಥಿತಿ ನಿರ್ಮಾಣವಾಗುವಸಾಧ್ಯತೆಯೂ ಇದೆ. ಪಕ್ಷೇತರರೇ ಕಿಂಗ್‌ಮೇಕರ್‌ ಆಗುವುದರಲ್ಲಿ ಸಂದೇಹವಿಲ್ಲ. ಇತ್ತಎಂಇಎಸ್‌ ಬೆಂಬಲಿತ ಪಕ್ಷೇತರರು ಹಾಗೂಇನ್ನುಳಿದ ಬಿಜೆಪಿ-ಕಾಂಗ್ರೆಸ್‌ ಬಂಡಾಯಅಭ್ಯರ್ಥಿಗಳು ಬಾಜಿ ಹೊಡೆದರೆ ಮುಂದೆಯಾರಿಗೆ ಬೆಂಬಲ ನೀಡಬೇಕು ಎಂದುಈಗಲೇ ಪ್ಲಾÂನ್‌ ಮಾಡಿಕೊಳ್ಳುತ್ತಿದ್ದಾರೆ.

ಬಿಜೆಪಿ ಮಿಷನ್‌ 45 ಅಡಿ ಪ್ರಚಾರಆರಂಭಿಸಿತ್ತು. ಕಾಂಗ್ರೆಸ್‌ ಪಕ್ಷವೂ 45 ವಾಡ್‌ìಗಳಿಗೆ ಅಭ್ಯರ್ಥಿ ಹಾಕಿ ಪಾಲಿಕೆ ಚುಕ್ಕಾಣಿಹಿಡಿಯಲು ತಂತ್ರ ರೂಪಿಸಿತ್ತು. ಈಗಪಕ್ಷೇತರರು ಹೆಚ್ಚಿನ ಸ್ಥಾನಗಳನ್ನು ಗೆದ್ದರೆಯಾರ ಬೆಂಬಲ ಪಡೆಯಬೇಕು ಎಂಬುದುರಾಜಕೀಯ ಪಕ್ಷಗಳ ಲೆಕ್ಕಾಚಾರವಾಗಿದೆ.ಎರಡೂ ರಾಷ್ಟಿÅàಯ ಪಕ್ಷಗಳ ಲೆಕ್ಕಾಚಾರಉಲ್ಟಾ ಆಗುವುದು ಬಹುತೇಕ ಖಚಿತಎನ್ನಲಾಗುತ್ತಿದೆ.

ಭೈರೋಬಾ ಕಾಂಬಳೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next