Advertisement

Belagavi; ಸವದತ್ತಿ ದೇಗುಲ ಬಳಿ ಸಿಲೆಂಡರ್‌ ಸ್ಫೋಟ: 15 ಮಂದಿಗೆ ಗಾಯ

09:37 PM Aug 13, 2024 | Team Udayavani |

ಸವದತ್ತಿ (ಬೆಳಗಾವಿ): ಯಲ್ಲಮ್ಮ ದೇವಸ್ಥಾನಕ್ಕೆ ಕೂಗಳತೆ ದೂರದಲ್ಲಿರುವ ರೇಣುಕಾ ಸಾಗರ ಲಾಡ್ಜ್ ತೆರೆದ ಕೋಣೆಯಲ್ಲಿ ಮಂಗಳವಾರ ಮುಂಜಾನೆ 7 ಗಂಟೆ ಸುಮಾರಿಗೆ ಕುಕ್ಕರ್‌ ಮತ್ತು ಗ್ಯಾಸ್‌ ಸಿಲೆಂಡರ್‌ ಸ್ಫೋಟಗೊಂಡು 9 ಜನ ಭಕ್ತರು, ಲಾಡ್ಜ್ ಸಿಬ್ಬಂದಿ ಸೇರಿ 15ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

Advertisement

ದೇವಿ ದರ್ಶನಕ್ಕೆಂದು ಆಗಮಿಸಿದ್ದ ಬೆಂಗಳೂರು ಮತ್ತು ಯಾದಗಿರಿ ಮೂಲದ ಭಕ್ತಾದಿಗಳು, ಲಾಡ್ಜ್ ತೆರೆದ ಅಡುಗೆ ಕೋಣೆಯಲ್ಲಿ ಕುಕ್ಕರ್‌ನಲ್ಲಿ ಆಹಾರ ಬೇಯಿಸುವಾಗ ಕುಕ್ಕರ್‌ ಹಠಾತ್ತನೇ ಸ್ಫೋಟಗೊಂಡು ಸಿಲಿಂಡರ್‌ ಮೇಲೆ ಬಿದ್ದಿದ್ದು ಸಿಲೆಂಡರ್‌ ಸಹ ಭಾಗಶಃ ಹಾನಿಯಾಗಿ ಅನಿಲ ಸೋರಿಕೆಯಿಂದ ಸ್ಫೋಟಗೊಂಡಿದೆ. ಕೋಣೆಯಲ್ಲಿದ್ದ ಪ್ಲಾಸ್ಟಿಕ್‌ ವಸ್ತುಗಳು ಸೇರಿ ಗೃಹ ಬಳಕೆ ವಸ್ತುಗಳಿಗೆ ಬೆಂಕಿ ಹೊತ್ತಿಕೊಂಡಿದೆ.

ಬೆಂಗಳೂರಿನ ರಾಮಸ್ವಾಮಿ ಚಿಕ್ಕಪುಳ್ಳಪ್ಪ (42), ವೆಂಕಟೇಶ ಕೃಷ್ಣಪ್ಪ (53), ರತ್ನಮ್ಮ ಗೋವಿಂದಪ್ಪ (48), ಗಣೇಶ ರಮೇಶಪ್ಪ ಕರೂರ (30), ಗದಗ ಜಿಲ್ಲೆಯ ಪ್ರಸಾದ ಜಾಧವ (34), ಯಾದಗಿರಿ ಜಿಲ್ಲೆಯ ಬಸಮ್ಮ ಬಿರಾದಾರ (56), ಸುಮಿತ್ರಾ ಯಕ್ಕಹಳ್ಳಿ (42) ಹಾಗೂ ಸಿದ್ದಮ್ಮ ಶೆಟಗೇರಿ ಗಾಯಗೊಂಡಿದ್ದಾರೆ. ಸವದತ್ತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next