Advertisement

ಬೆಳಗಾವಿ ಎಪಿಎಂಸಿ ಅಧ್ಯಕ್ಷರಾಗಿ ಯುವರಾಜ, ಉಪಾಧ್ಯಕ್ಷರಾಗಿ ಮಹಾದೇವಿ ಆಯ್ಕೆ

01:34 PM Jun 15, 2020 | keerthan |

ಬೆಳಗಾವಿ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕೊನೆಯ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ನ ಉಚಗಾಂವಿಯ ಯುವರಾಜ ಕದಂ ಅಧ್ಯಕ್ಷರಾಗಿ ಹಾಗೂ ಹುದಲಿಯ ಮಹಾದೇವಿ ಖಾನಗೌಡರ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.

Advertisement

20 ತಿಂಗಳ ಅವಧಿಗಾಗಿ ಸೋಮವಾರ ನಡೆದ ಚುನಾವಣೆಯಲ್ಲಿ ಉಚಗಾಂವ ಕ್ಷೇತ್ರದ ಯುವರಾಜ ಕದಂ ಹಾಗೂ ಹುದಲಿ ಮಹಾದೇವಿ ಖಾನಗೌಡರ ಆಯ್ಕೆಯಾದರು.‌ ಕಳೆದ ಎರಡು ದಿನಗಳಿಂದ ಅಭ್ಯರ್ಥಿ ಆಯ್ಕೆಗಾಗಿ ತೀವ್ರ ಪೈಪೋಟಿ ನಡೆದಿತ್ತು.‌ ಕೊನೆಯ ಕ್ಷಣದಲ್ಲಿ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಯಿತು.

ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರ ಆಪ್ತ ಯುವರಾಜ ಹಾಗೂ ಸತೀಶ ಆಪ್ತೆ ಮಹಾದೇವಿ ಆಯ್ಕೆಯಾದರು.‌

ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನ ಯುವರಾಜ ಕದಂ, ಲಗಮಣ್ಣ ನಾಯಕ, ಸಂಜೀವ ಮಾದರ ಹಾಗೂ ಬಿಜೆಪಿಯ ರೇಣುಕಾ ಪಾಟೀಲ, ಎಂಇಎಸ್ ಮಹೇಶ ಜುವೇಕರ ನಾಮಪತ್ರ ಸಲ್ಲಿಸಿದ್ದರು.‌ ಇದರಲ್ಲಿ ಮೂವರು ನಾಮಪತ್ರ ವಾಪಸ್ಸು ಪಡೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next