Advertisement

ಭಿಕ್ಷಾಟನೆಗೆ ಪ್ರೋತ್ಸಾಹ: ಕ್ರಮಕ್ಕೆ ಶಿಫಾರಸು

12:24 AM Sep 16, 2021 | Team Udayavani |

ಬೆಂಗಳೂರು: ಭಿಕ್ಷಾಟನೆ  ಹಿಂದೆ ದೊಡ್ಡ ಜಾಲವಿದ್ದು, ಅದನ್ನು ಮಟ್ಟ ಹಾಕುವಲ್ಲಿ ಗೃಹ ಇಲಾಖೆ ವಿಫ‌ಲವಾಗಿದೆ. ಆದ್ದರಿಂದ ಭಿಕ್ಷಾಟನೆಗೆ ತೊಡಗಿರುವ ಹಾಗೂ ಪ್ರೋತ್ಸಾಹ ನೀಡುವವರ ಮೇಲೆ ಕ್ರಮ ಕೈಗೊಳ್ಳುವಂತೆ ವಿಧಾನ ಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿ ಸರಕಾರಕ್ಕೆ ಶಿಫಾರಸು ಮಾಡಿದೆ.

Advertisement

ವಿಧಾನಸಭೆಯಲ್ಲಿ ಬುಧವಾರ ಸಮಿತಿ ಅಧ್ಯಕ್ಷೆ ಕೆ. ಪೂರ್ಣಿಮಾ ಅವರು ವರದಿ ಮಂಡಿಸಿದ್ದು,  ಭಿಕ್ಷಾಟನೆ  ಮಾಡುವವರನ್ನು ಬಂಧಿಸಿ ಅವರ ಮನವೊಲಿಸುವ  ಮೂಲಕ ಸಮಾಜದ ಮುಖ್ಯ ವಾಹಿನಿಗೆ ತರಬೇಕು ಎಂದು ಹೇಳಿದೆ. ತಿಳಿಸಲಾಗಿದೆ.

ಅಂಗವಿಲಕರ ಠೇವಣಿ ಮೊತ್ತ ಹೆಚ್ಚಿಸಿ:

ಅಂಗವಿಕಲರ ಹೆಸರಿನಲ್ಲಿಡುವ ಠೇವಣಿ ಮೊತ್ತವನ್ನು 50 ಸಾವಿರದಿಂದ 1 ಲಕ್ಷಕ್ಕೇರಿಸ ಬೇಕು. 5 ವರ್ಷಗಳ ಠೇವಣಿ ಮೊತ್ತವನ್ನು 10 ವರ್ಷಗಳಿಗೆ ವಿಸ್ತರಿಸಬೇಕು ಎಂದು ಶಿಫಾರಸು ಮಾಡಿದೆ.

ಆರೈಕೆ ಭತ್ತೆ ಹೆಚ್ಚಳ ಅಗತ್ಯ:

Advertisement

ಅಂಧ ಮಹಿಳೆಯರಿಗೆ ಜನಿಸುವ ಮಗುವಿನ  ಆರೈಕೆ ಭತ್ತೆಯನ್ನು 2 ಸಾವಿರದಿಂದ 4 ಸಾವಿರ ರೂ.ಗಳಿಗೆ ಹೆಚ್ಚಿಸಬೇಕು ಹಾಗೂ ಈ ಸೌಲಭ್ಯವನ್ನು ಕನಿಷ್ಠ 2 ಮಕ್ಕಳಿಗೆ ನೀಡುವಂತಾಗಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

ಮಾಸಾಶನ ಹೆಚ್ಚಿಸಿ :

ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿ ವೃದ್ಧಿಗಾಗಿ ಮೀಸಲಿಟ್ಟಿರುವ ಹಣ ಮೂರು ವರ್ಷಗಳಿಂದ ಸದ್ಬಳಕೆ ಯಾಗಿಲ್ಲ. ಆ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಮಿತಿ ಶಿಫಾರಸು ಮಾಡಿದೆ. ಪ್ರಸ್ತುತ ಶೇ.45ರಿಂದ 70ರಷ್ಟು ಅಂಗ ವೈಕಲ್ಯ  ಹೊಂದಿರುವವರಿಗೆ  ನೀಡ ಲಾಗು ತ್ತಿರುವ ಮಾಸಾಶನವನ್ನು 800 ರೂ.ದಿಂದ 3 ಸಾವಿರ ರೂ.ಗಳಿಗೆ ಹಾಗೂ ಶೇ.75ಕ್ಕಿಂತ ಹೆಚ್ಚು ಅಂಗವೈಕಲ್ಯ ಹೊಂದಿರು ವವರಿಗೆ  6 ಸಾವಿರ ರೂ. ಮಾಸಾಶನ ನೀಡಲು ಶಿಫಾರಸು ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next