Advertisement

ಕುಣಿಗಲ್: ಭಿಕ್ಷಾಟನೆ; ಮೂರು ಮಂದಿ ರಕ್ಷಣೆ

03:50 PM Aug 19, 2022 | Team Udayavani |

ಕುಣಿಗಲ್: ಪಟ್ಟಣದಲ್ಲಿ ಭಿಕ್ಷಾಟನೆ, ಚಿಂದಿ ಆಯುವ ಬಾಲಕಿ, ಮಗು ಸೇರಿದಂತೆ ಮೂರು ಮಂದಿಯನ್ನು ರಕ್ಷಣೆ ಮಾಡಲಾಗಿದೆ.

Advertisement

ಶುಕ್ರವಾರ ಸಾರಿಗೆ ಬಸ್ ನಿಲ್ದಾಣ, ಸಂತೇ ಮೈದಾನ, ಆರ್.ಎಂ.ಸಿ ಯಾರ್ಡ್, ಘನ ತಾಜ್ಯ ವಿಲೇವಾರಿ ಘಟಕ, ಹಾಗೂ ವಿವಿಧ ಬೀದಿಗಳಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ,  ಪೊಲೀಸ್ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕಾರ್ಮಿಕ  ಇಲಾಖೆ, ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು  ಜಂಟಿ ಕಾರ್ಯಾಚರಣೆ ನಡೆಸಿ ಒಬ್ಬ ಬಾಲಕಿ, ಮಗು ಹಾಗೂ ಮಗುವಿನ ತಾಯಿಯನ್ನು ರಕ್ಷಣೆ ಮಾಡಿ ಸರ್ಕಾರಿ ಆಸ್ಪತ್ರೆ ಯ ವೈದ್ಯರಿಂದ ತಪಾಸಣೆ ಮಾಡಿಸಿ, ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಿ, ಸೂಕ್ತ ಪುನರ್ವಸತಿ ಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಿಡಿಪಿಐ ಅನುಷಾ ತಿಳಿಸಿದ್ದಾರೆ.

ದಾಳಿಯಲ್ಲಿ ಪಿ.ಎಸ್.ಐ ಜಮಾಲ್ ಅಹಮದ್, ಸಮಾಜ ಕಲ್ಯಾಣ ಇಲಾಖೆಯ ಉಮೇಶ್ ಸೇರಿದಂತೆ ಮತ್ತಿತರರು ಭಾಗವಹಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next