Advertisement

ಚಳಿಗಾಳಿ ತಾಳಲಾರದೇ ನಿಲ್ದಾಣದಲ್ಲಿ ಭಿಕ್ಷುಕ ಸಾವು ..!

02:45 PM Nov 29, 2021 | Team Udayavani |

ಶ್ರೀನಿವಾಸಪುರ: ಭಿಕ್ಷುಕನೊಬ್ಬ ಚಳಿ ತಡೆಯಲಾರದೇ ಬಸ್‌ ನಿಲ್ದಾಣದಲ್ಲಿ ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ. ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವ ಆಸನಗಳ ಬದಿಯಲ್ಲಿ ಮಲಗಿದ್ದ 45 ವರ್ಷದ ವ್ಯಕ್ತಿ ಮೃತಪಟ್ಟಿದ್ದು,

Advertisement

ಇತ್ತೀಚಿಗೆ ಸುರಿದ ಮಳೆ, ಕೊರೆಯುವ ಚಳಿಯಲ್ಲಿ ಬೆಡ್‌ಶೀಟ್‌ ಕೂಡ ಇಲ್ಲದೆ ಮಲಗಿದ್ದು, ಚಳಿ ತಡೆಯಲಾರದೇ ಮೃತಪಟ್ಟಿದ್ದಾನೆ. ಬಸ್‌ ನಿಲ್ದಾಣದ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.

ಮೃತನು ಪಟ್ಟಣದ ನಿವಾಸಿಯೋ, ಅಥವಾ ಆಂಧ್ರ ಪ್ರದೇಶದವನೋ ತಿಳಿಯುತ್ತಿಲ್ಲ. ತಾಲೂಕಿನ ಲೋಚೆರವುಪಲ್ಲಿಯಲ್ಲಿ ಮದುವೆಯಾಗಿದ್ದಾನೆಂಬ ಮಾಹಿತಿಗಳು ಲಭ್ಯವಾದರೂ ನಿಖರವಾಗಿಲ್ಲ. ಇದಕ್ಕೆ ಸಂಬಂಧಿಸಿದಂತೆ ಮೃತನ ವಾರಸುದಾರರು ಬರುತ್ತಾರೆಂಬ ವಿಷಯ ಮಾತ್ರ ಪೊಲೀಸ್‌ ಠಾಣೆಯಿಂದ ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next