Advertisement

ಬಿಜೆಪಿ ಅಧಿಕಾರಕ್ಕೆ ಬರಲಿದೆಯಾ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

01:30 PM Oct 16, 2021 | Team Udayavani |

ಚಿಕ್ಕಮಗಳೂರು: ಶುಕ್ರವಾರ ರಾತ್ರಿ ಮೈಲಾರಲಿಂಗ ಸ್ವಾಮಿಯ ಪಲ್ಲಕ್ಕಿ ಉತ್ಸವದಲ್ಲಿ ಬೀರೂರಿನ ಸುಪ್ರಸಿದ್ದ ಮೈಲಾರಸ್ವಾಮಿ ಕಾರ್ಣಿಕ ನುಡಿಯಲಾಗಿದೆ.

Advertisement

“ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ. ಸಿಂಹಾಸನಕ್ಕೆ ಗಿಳಿಗಳು ಕುಟುಕಿವು, ದಾನವರು ಮಾನವರಿಗೆ ಕಂಟಕವಾದರು, ರಾಮರಾಜ್ಯಕ್ಕೆ ಸರ್ವರು ಹೊಡೆ ಹೊಡೆದರು, ಸರ್ವರು ಎಚ್ಚರದಿಂದರಬೇಕು” ಎಂದು ಕಾರ್ಣಿಕ ನುಡಿಯಲಾಗಿದೆ.

ಇದನ್ನೂ ಓದಿ:ಸುಬ್ರಹ್ಮಣ್ಯ: ಚಲಿಸುತ್ತಿದ್ದ ಬೈಕ್ ಮೇಲೆ ಜಿಗಿದ ಕಡವೆ; ಸವಾರ ಮೃತ್ಯು

ದಶರಥ ಪೂಜಾರ್ ಅವರ ಬಾಯಲ್ಲಿ ಕಾರ್ಣಿಕದ ನುಡಿ ಬಂದಿದೆ.

Advertisement

ಕಾರ್ಣಿಕ ನುಡಿಯ ಅರ್ಥ: ‘ಇಟ್ಟ ರಾಮನ ಬಾಣಕ್ಕೆ ಹುಸಿಯಿಲ್ಲ’ ಎಂದರೆ ದೇವರ ಮಾತು ಸತ್ಯವಾಗಲಿದೆ. ‘ಸಿಂಹಾಸನಕ್ಕೆ ಗಿಳಿಗಳು ಕುಟುಕಿವು’ ಎಂದರೆ ರಾಜಕೀಯದಲ್ಲಿ ಒಳಗಿನವರಿಂದ ಹೊರಗಿನವರಿಂದ ತೊಂದರೆಯಾಗಲಿದೆ. ‘ದಾನವರು ಮಾನವರಿಗೆ ಕಂಟಕವಾದರು’ ಎಂದರೆ ಕೆಟ್ಟ ಜನರಿಂದ ಒಳ್ಳೇಯವರಿಗೆ ತೊಂದರೆಯಾಗಲಿದೆ. ‘ರಾಮರಾಜ್ಯಕ್ಕೆ ಸರ್ವರು ಹೊಡೆ ಹೊಡೆದರು’ ಎಂದರೆ ರಾಮನ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ಸರ್ವರಿಂದ ಸೋಲುಣುವಂತಾಗಲಿದೆ ಎಂಬುದು ಈ ಕಾರ್ಣಿಕದ ಅರ್ಥ ಎಂದು ವಿಶ್ಲೇಷಿಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next