Advertisement

Ramanagara: ಸಿದ್ದಪ್ಪಾಜಿ ದೇವರ ಮುಂದೆ ಕೈಮುಗಿದು ನಿಂತ ಜಾಂಬವಂತ.! CCTVಯಲ್ಲಿ ದೃಶ್ಯ ಸೆರೆ

10:37 AM Feb 09, 2024 | Team Udayavani |

ರಾಮನಗರ: ಇಲ್ಲಿನ ಸಿದ್ದಪ್ಪಾಜಿ ದೇವಾಲಯಕ್ಕೆ ಕಳೆದ ಕೆಲ ದಿನಗಳಿಂದ ಕರಡಿಯೊಂದು ಭೇಟಿ ನೀಡುವ ವಿಡಿಯೋ ಇಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ರಾಮನಗರ ತಾಲೂಕಿನ ತಿಮ್ಮಸಂದ್ರ ಗ್ರಾಮದಲ್ಲಿರುವ ಸಿದ್ದಪ್ಪಾಜಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದ್ದು ಇದನ್ನು ಕಂಡ ಇಲ್ಲಿನ ನಿವಾಸಿಗಳಿಗೆ ಒಂದೆಡೆ ಆಶ್ಚರ್ಯವಾದರೆ ಇನ್ನೊಂದೆಡೆ ಆತಂಕವೂ ಮನೆಮಾಡಿದೆ.

Advertisement

ಗ್ರಾಮದ ಸಿದ್ದಪ್ಪಾಜಿ ದೇವಾಲಯದ ನಿತ್ಯ ಕಾಣಿಸಿಕೊಳ್ಳುವ ಕರಡಿ ದೇವಾಲಯದ ಮುಂಭಾಗ ಬಂದು ಬಾಗಿಲು ಬಡಿಯುವ ದೃಶ್ಯ ಇಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಿಸಿ ಕ್ಯಾಮೆರಾದಲ್ಲಿ ಕರಡಿ ಕೈ ಮುಗಿದು ನಿಂತಂತೆ ಕಾಣುತ್ತಿದ್ದು ಇದರ ವಿಡಿಯೋ ಕಂಡು ಇಲ್ಲಿನ ಸ್ಥಳೀಯರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ರಾಮನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳಿಂದ ಗ್ರಾಮದ ಸುತ್ತಮುತ್ತ ಕರಡಿ ಬೀಡು ಬಿಟ್ಟಿರುವುದಾಗಿ ಸ್ಥಳೀಯರು ಹೇಳಿದ್ದಾರೆ.

ಇದನ್ನೂ ಓದಿ: Childbirth: ಮೂರು ಗಂಡು ಮಕ್ಕಳಿಗೆ ಜನ್ಮ ನೀಡಿದ ಕಟ್ಟಡ ಕಾರ್ಮಿಕ ಮಹಿಳೆ !

Advertisement

Udayavani is now on Telegram. Click here to join our channel and stay updated with the latest news.

Next