Advertisement

ಮಧ್ಯರಾತ್ರಿ ಹೊಲ ಕಾಯಲು ಹೋದ ಯುವಕರ ಮೇಲೆ ಕರಡಿ ದಾಳಿ! ಗ್ರಾಮಸ್ಥರಲ್ಲಿ ಆತಂಕ

02:37 PM Nov 02, 2020 | sudhir |

ಗಂಗಾವತಿ: ತಾಲೂಕಿನ ವೆಂಕಟಗಿರಿ ಹೋಬಳಿಯ ಬಂಡ್ರಾಳ ಗ್ರಾಮದಲ್ಲಿ ಇಬ್ಬರ ಮೇಲೆ ರವಿವಾರ ಮಧ್ಯರಾತ್ರಿ ಹೊಲದಲ್ಲಿ ಕರಡಿ ದಾಳಿ‌ ಮಾಡಿದೆ. ದಾಳಿಗೊಳಗಾದ ಇಬ್ಬರಿಗೂ ತಲೆ ಮತ್ತು ಕಾಲಿಗೆ ತೀವ್ರ ಗಾಯಗಳಾಗಿವೆ.

Advertisement

ತಮ್ಮ ಹೊಲದಲ್ಲಿ ಮೆಕ್ಕೆಜೋಳ ಕಾವಲು ಕಾಯುವ ಸಂದರ್ಭದಲ್ಲಿ ಬಂಡ್ರಾಳ ಗ್ರಾಮದ ಮಲ್ಲಪ್ಪ ಜಲ್ಲಿ(30) ದುರುಗಪ್ಪ ಜಲ್ಲಿ (60) ಇರ್ವರ ಮೇಲೆ ಕರಡಿ ದಾಳಿ ಮಾಡಿ ತಲೆ ಮತ್ತು ಕಾಲಿಗೆ ಗಾಯಗೊಳಿಸಿದೆ. ಸರ್ಕಾರ ಆಸ್ಪತ್ರೆಯಲ್ಲಿ ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ.

ವೆಂಕಟಗಿರಿ, ಉಡಮಕಲ್, ಆಗೋಲಿ, ವಿಠಲಾಪೂರ, ಬಂಡ್ರಾಳ ಬೆಣಕಲ್ ಮತ್ತು ಮುಕ್ಕುಂಪಿ ಭಾಗದಲ್ಲಿ ಕರಡಿ ಹಾಗೂ ಚಿರತೆಗಳು ವ್ಯಾಪಕವಾಗಿದೆ.

ಕಳೆದ ತಿಂಗಳು ಆನೆಗೊಂದಿ ಜಂಗ್ಲಿ ರಂಗಾಪೂರ ಭಾಗದಲ್ಲಿ ಮಹಿಳೆ ಹಾಗೂ 10 ವರ್ಷದ ಬಾಲಕ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿತ್ತು.

Advertisement

Udayavani is now on Telegram. Click here to join our channel and stay updated with the latest news.

Next