Advertisement

 ಬಹಿರ್ದೆಸೆಗೆ ತೆರಳಿದ್ದ ಮಹಿಳೆಯನ್ನು ಕೊಂದು ಮುಗಿಸಿದ ಕರಡಿ 

02:25 PM Jan 18, 2018 | |

ಕನಕಪುರ : ಬಯಲು ಶೌಚ ಮುಕ್ತ ದೇಶಕ್ಕಾಗಿ ಜಾಗೃತಿ ನಡೆಯುತ್ತಿರುವ ವೇಳೆಯಲ್ಲೇ  ಬಹಿರ್ದೆಸೆಗೆಂದು ಹೋಗಿದ್ದ ಗರ್ಭಿಣಿಯೊಬ್ಬರನ್ನು ಕರಡಿಯೊಂದು ದಾಳಿ ನಡೆಸಿ ಕೊಂದಿರುವ ದಾರುಣ ಘಟನೆ ಗುರುವಾರ ನಡೆದಿದೆ.

Advertisement

ಚೌಕಸಂದ್ರ ಎಂಬಲ್ಲಿ  ಬೆಳಗಿನ ಜಾವ ಸುಮಾಬಾಯಿ ಎಂಬ 25 ವರ್ಷದ ಗರ್ಭಿಣಿ ಮನೆಯ ಹಿಂಬಂದಿ  ಶೌಚಕ್ಕೆಂದು ತೆರಳಿದ್ದ ವೇಳೆ ಕರಡಿ ದಾಳಿ ನಡೆಸಿ ಕತ್ತಿನ ಭಾಗಕ್ಕೆ ಕಚ್ಚಿ ಕೊಂದಿದೆ.

ಪ್ರದೀಪ್‌ ಕುಮಾರ್‌ ಎನ್ನುವವರ ಪತ್ನಿಯಾಗಿರುವ ಸುಮಾಗೆ ಈಗಾಗಲೇ ಒಂದು ಗಂಡು ಮಗುವಿದ್ದು 2 ನೇ ಮಗುವಿಗಾಗಿ ಗರ್ಭಿಣಿಯಾಗಿದ್ದರು.

ದಾಳಿಯಿಂದ ತೀವ್ರ ರಕ್ತ ಸ್ರಾವವಾದುದರಿಂದ ಕೊನೆಯುಸಿರೆಳೆದಿರುವುದಾಗಿ ವರದಿಯಾಗಿದೆ. ಮೊದಲು ಚಿರತೆ ದಾಳಿಯಿಂದ ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿತ್ತು.

ಕನಕಪುರ ವಲಯ ಅರಣ್ಯ ಇಲಾಖೆ ಸಿಬಂದಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ .ಕನಕಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next