Advertisement

Kanakagiri ದೇಗುಲಕ್ಕೆ ಬಂದಿದ್ದ ಕರಡಿ ಸೆರೆ ಹಿಡಿಯುವಾಗ ದಾಳಿ: ವೃದ್ಧ ಸಾವು

10:54 PM Apr 19, 2024 | Team Udayavani |

ಕನಕಗಿರಿ: ರಾಂಪುರದ ಹೊರ ವಲಯದ ಆಂಜನೇಯ ದೇಗುಲದಲ್ಲಿ ಸೆರೆ ಹಿಡಿದಿದ್ದ ಕರಡಿಯನ್ನು ಬೋನಿನಲ್ಲಿ ಹಾಕುವ ಸಮಯದಲ್ಲಿ ಅದು ದಾಳಿ ಮಾಡಿದ ಪರಿಣಾಮ ಚೆನ್ನಪ್ಪ ಮಡಿವಾಳ (74) ಎಂಬವರು ಮೃತಪಟ್ಟ ಘಟನೆ ನಡೆದಿದೆ.

Advertisement

ಗ್ರಾಮದ ಆಂಜನೇಯ ದೇಗುಲದಲ್ಲಿ ಭಕ್ತರು ಪೂಜೆ ಸಲ್ಲಿಸಿ ಮೂರ್ತಿಗೆ ಹಾಕಿದ್ದ ಎಣ್ಣೆಯನ್ನು ನೆಕ್ಕಲು ಕರಡಿಯೊಂದು ಪ್ರತಿ ನಿತ್ಯವೂ ದೇಗುಲಕ್ಕೆ ಬರುತ್ತಿತ್ತು. ನಸುಕಿನ ಜಾವ ಸ್ಥಳೀಯರೊಬ್ಬರು ದೇಗುಲದೊಳಗೆ ಕರಡಿ ಹೋಗಿರುವುದನ್ನು ಗಮನಿಸಿ ಬಾಗಿಲು ಹಾಕಿ ಅರಣ್ಯ ಇಲಾಖೆಗೆ ತಿಳಿಸಿದ್ದಾರೆ.

ಸ್ಥಳಕ್ಕೆ ಬಂದ ಇಲಾಖೆ ಸಿಬಂದಿ ಕಾಯಾಚರಣೆ ಕೈಗೊಂಡ ವೇಳೆ ಚೆನ್ನಪ್ಪ ಮೇಲೆ ಕರಡಿ ದಾಳಿ ಮಾಡಿ ಎದೆ ಹಾಗೂ ಕುತ್ತಿಗೆ ಭಾಗಕ್ಕೆ ತೀವ್ರ ಘಾಸಿಗೊಳಿಸಿದ್ದು, ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next