Advertisement

ಬೀಚ್‌ನಲ್ಲಿ ಮೋಜು ಮಸ್ತಿಗಿಳಿದು ನೀರುಪಾಲು : ಅನ್ಯ ಜಿಲ್ಲೆಯವರೇ ಹೆಚ್ಚು

08:28 PM Jun 08, 2022 | Team Udayavani |

ಬೈಕಂಪಾಡಿ : ಮಳೆಗಾಲ ಸಮೀಪಿಸುತ್ತಿದ್ದರೂ, ಬೀಚ್‌ ಕಡೆ ನಿರಂತರವಾಗಿ ಪ್ರವಾಸಿಗರು ಬರುತ್ತಿದ್ದಾರೆ. ಪ್ರಮುಖವಾಗಿ ಪಣಂಬೂರು, ಸುರತ್ಕಲ್‌ ಸಸಿಹಿತ್ಲು, ಮಲ್ಪೆ ಮತ್ತಿತರ ಕಡೆ ಬೀಚ್‌ಗೆ ಇಳಿಯದಂತೆ ನೋಡಲು ಕಾವಲು ಸಿಬಂದಿಗಳನ್ನು ನಿಯೋಜಿಸಲಾಗಿದೆ. ಆದರೆ ಎಲ್ಲ ಕಡೆ ಭದ್ರತೆ ಅಸಾಧ್ಯ. ಎಲ್ಲಿ ಭದ್ರತೆ ಇಲ್ಲವೋ ಅಲ್ಲಿ ಕಣ್ಣು ತಪ್ಪಿಸಿ ಬೀಚ್‌ಗಿಳಿದು ಮೋಜು ಮಸ್ತಿ ಮಾಡುವ ಕೆಲವರು ನೀರುಪಾಲಾಗುತ್ತಿರುವುದು ಮಲ್ಪೆ, ಬೈಕಂಪಾಡಿ, ಸುರತ್ಕಲ್‌ ಬೀಚ್‌ಗಳಲ್ಲಿ ಹೆಚ್ಚಾಗಿದೆ.

Advertisement

ವಿಶೇಷವೆಂದರೆ ಇಲ್ಲಿ ನೀರುಪಾಲಾಗುತ್ತಿರುವವರಲ್ಲಿ ಅನ್ಯ ರಾಜ್ಯ, ಅನ್ಯ ಜಿಲ್ಲೆಯವರೇ ಹೆಚ್ಚು. ದೂರದ ಹುಬ್ಬಳ್ಳಿ, ಧಾರವಾಡ, ಬೆಂಗಳೂರು, ಹಾಸನ, ಕೇರಳ ಮೊದಲಾದ ಕಡೆಗಳಿಂದ ಪ್ರವಾಸಕ್ಕೆ ಬರುವವರು ಇಲ್ಲಿನ ಬೀಚ್‌ಗಳ ತೆರೆಗಳನ್ನು ಕಂಡು ಈಜಲು ಇಳಿಯುತ್ತಾರೆ. ಸ್ಥಳೀಯರು ಬೇಡವೆಂದರೂ ಕೇಳದ ಮಂದಿ ನೀರಿಗಿಳಿದೇ ಬಿಡುತ್ತಾರೆ. ಬೇರೆ ಜಿಲ್ಲೆಗಳ ನದಿ, ಕೆರೆಗಳಲ್ಲಿ ಹೆಚ್ಚಿನ ಸೆಳೆತ ಇರುವುದಿಲ್ಲ. ಆದರೆ ಕರಾವಳಿ ಕರ್ನಾಟಕದ ಇಲ್ಲಿನ ಬೀಚ್‌ಗಳಲ್ಲಿ ನೀರಿನ ಸೆಳೆತ ಹೆಚ್ಚಿರುತ್ತದೆ. ಮಳೆಗಾಲದಲ್ಲಂತೂ ಮತ್ತೂ ಹೆಚ್ಚಿನ ಪ್ರಕ್ಷುಬ್ದತೆ, ಸೆಳೆತವಿರುತ್ತದೆ. ಇದು ಹೊರಜಿಲ್ಲೆಯ ಯುವಕ-ಯುವತಿಯರ ಅರಿವಿಗೆ ಬರುವುದಿಲ್ಲ. ಸುಳಿ ಪ್ರದೇಶ, ಹೊಗೆ ಕರಗಿ ಆಳವಾದ ಕಂದಕ ಇವುಗಳನ್ನು ಗುರುತಿಸಲೂ ಸಾಧ್ಯವಾಗದು. ಇಲ್ಲಿನ ಸ್ಥಳೀಯರು, ಭದ್ರತ ಸಿಬಂದಿಗಳು ಎಷ್ಟು ಹೇಳಿದರೂ ಅವರು ಕೇಳುವ ಸ್ಥಿತಿಯಲ್ಲಿ ಇರೋದಿಲ್ಲ. ಹಾಗಾಗಿ ಅವರು ನೀರುಪಾಲಾಗಿ ಜೀವವನ್ನೇ ಕಳೆದುಕೊಂಡಿರುತ್ತಾರೆ. ಅದೆಷ್ಟೋ ಮಂದಿಯನ್ನು ಲೈಫ್ಗಾರ್ಡ್‌ಗಳು, ಪೊಲೀಸರು, ಸ್ಥಳೀಯರು ರಕ್ಷಣೆ ಮಾಡಿ ಜೀವ ಉಳಿಸಿದ್ದಾರೆ.

ಇದನ್ನೂ ಓದಿ : ಎಐಸಿಸಿ ಅಧ್ಯಕ್ಷ ಸ್ಥಾನ ಯಾವ ಜಾತಿಯವರಿಗೆಲ್ಲಾ ನೀಡಿದ್ದೀರಿ?: ಸಿದ್ದುಗೆ ಬಿಜೆಪಿ ಸವಾಲು

ಬೈಕಂಪಾಡಿ ಬಳಿ ಕೆಲವು ಮಂದಿ ಹುಬ್ಬಳ್ಳಿಯ ಯುವಕರು ಇತ್ತೀಚೆಗೆ ಈಜಲು ಬಂದಿದ್ದರು. ಬೃಹತ್‌ ತೆರೆ ಅಪ್ಪಳಿಸುತ್ತಿದ್ದರೂ, ಎದುರಾಗಿ ಹೋಗುತ್ತಿದ್ದುದನ್ನು ಕಂಡು ಬುದ್ಧಿವಾದ ಹೇಳಿ ಹಿಂದಕ್ಕೆ ಕಳಿಸಿದ್ದೇನೆ. ಯಾರೂ ಇಲ್ಲದಾಗ ಅಪಾಯವಾದರೆ ಏನೂ ಮಾಡಲಾಗದು. ಮಳೆಗಾಲದಲ್ಲಿ ಸಮುದ್ರದಲ್ಲಿ ಪರಿಣಿತರಿಗೂ ಈಜಲು ಕಷ್ಟ. ದೂರದಿಂದ ಬಂದವರಿಗೆ ಇದರ ಅರಿವು ಇರುವುದಿಲ್ಲ.
– ವಾಸು, ಬೈಕಂಪಾಡಿ ಬೀಚ್‌ ಬಳಿ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next