Advertisement

ಬಿಡಿಡಿ ಏಜಂಟ್‌ ರಂಗನಾಥ ಪಡಿಯಾರ್‌ ಸೇವಾ ನಿವೃತ್ತಿ

04:58 PM Jul 14, 2021 | Team Udayavani |

ಮುಂಬಯಿ: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಸಂಚಾಲಿತ ಭಾರತ್‌ ಬ್ಯಾಂಕ್‌ ಕಾಂದಿವಲಿ ಪಶ್ಚಿಮ ಶಾಖೆಯ ಬಿಡಿ.ಡಿ. ಏಜಂಟ್‌ ರಂಗನಾಥ ಪಡಿಯಾರ್‌ ಅವರು ಸೇವಾ ನಿವೃತ್ತರಾಗಿದ್ದಾರೆ.

Advertisement

ಮೂಲತಃ ಉಡುಪಿ ಕಲ್ಯಾಣಪುರದವರಾದ ಇವರು 1998ರಿಂದ ಕಾಂದಿವಲಿ, ಮಲಾಡ್‌, ಬೊರಿವಲಿ ಪರಿಸರದ ಹೆಚ್ಚಿನ ಜನತೆಗೆ ಚಿತಪರಿಚಿತರು. ಎಲ್ಲರೊಂದಿಗೆ ನಗುಮುಖದಿಂದ ವ್ಯವಹರಿಸುತ್ತಿರುವ ಇವರು ಬ್ಯಾಂಕಿನ ಅಭಿವೃದ್ದಿಗಾಗಿ ತಮ್ಮ ಅಮೂಲ್ಯ ಕೊಡುಗೆ ನೀಡಿದ್ದಾರೆ.

ಜು. 9ರಂದು ಇವರಿಗೆ ಭಾರತ್‌ ಬ್ಯಾಂಕ್‌ ಕಾಂದಿವಲಿ ಪಶ್ಚಿಮದ ಶಾಖೆಯಲ್ಲಿ ಪ್ರಬಂಧಕರಾದ ಜಯ ಅವನೀಶ್‌ ಬಂಗೇರ ಅವರು ಸಮ್ಮಾನಿಸಿ ಗೌರವಿಸಿದರು.

ಉಪಪ್ರಬಂಧಕರಾದ ರಾಹುಲ್‌ ಟಿ. ಸಾಲ್ಯನ್‌, ದಿನೇಶ್‌ ಎಸ್‌. ಪೂಜಾರಿ ಮತ್ತು ಕಾಂದಿವಲಿ ಶಾಖೆಯ ಎಲ್ಲ ಸಿಬಂದಿ ಉಪಸ್ಥಿತರಿದ್ದು ನಿವೃತ್ತಿ ಜೀವನ ಸಂತೋಷದಾಯಕವಾಗಿರಲಿ ಎಂದು ಅಭಿನಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next