Advertisement

BC Road; ಹಿಂದಕ್ಕೆ ಚಲಿಸಿದ್ದ ಲಾರಿ ಢಿಕ್ಕಿ: ಸ್ಕೂಟರ್‌ ಸವಾರ ಮೃತ್ಯು

12:07 AM Feb 26, 2024 | Team Udayavani |

ಬಂಟ್ವಾಳ: ತರಕಾರಿ ಲೋಡ್‌ ಖಾಲಿ ಮಾಡಿ ಹಿಂದಕ್ಕೆ ಚಲಿಸುತ್ತಿದ್ದ ಲಾರಿಯೊಂದು ಸ್ಕೂಟರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟರ್‌ ಸವಾರ ಮೃತಪಟ್ಟು, ಸಹಸವಾರ ಗಂಭೀರವಾಗಿ ಗಾಯಗೊಂಡ ಘಟನೆ ರವಿವಾರ ಮುಂಜಾನೆ ಬಿ.ಸಿ. ರೋಡ್‌ನ‌ ಕೈಕಂಬದಲ್ಲಿ ಸಂಭವಿಸಿದೆ.

Advertisement

ಪಾಣೆಮಂಗಳೂರು ಆಲಡ್ಕ ನಿವಾಸಿ ಆಶ್ರಫ್‌ (32) ಮೃತಪಟ್ಟವರು. ಸಹಸವಾರ ತನ್ವೀರ್‌ ಗಾಯ
ಗೊಂಡಿದ್ದಾರೆ. ಇವರು ಸ್ನೇಹಿತರಾಗಿದ್ದು, ಕೈಕಂಬದ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡುವ ತನ್ವೀರ್‌ ಅವರನ್ನು ಅಂಗಡಿಗೆ ಬಿಡುವ ಉದ್ದೇಶದಿಂದ ಮುಂಜಾನೆ 5.30ಕ್ಕೆ ಅಶ್ರಫ್‌ ತೆರಳಿದ್ದರು.

ತರಕಾರಿ ಅಂಗಡಿಯ ಮುಂಭಾಗಕ್ಕೆ ತಲುಪಿ ಸ್ನೇಹಿತನನ್ನು ಇನ್ನೇನು ಇಳಿಸ ಬೇಕು ಎನ್ನುವಷ್ಟರಲ್ಲಿ ಲಾರಿಯನ್ನು ಚಾಲಕ ಹಿಂದಕ್ಕೆ ಚಲಾಯಿಸಿದ್ದ. ಈ ವೇಳೆ ಸ್ಕೂಟರ್‌ಗೆ ಢಿಕ್ಕಿ ಹೊಡೆದು ಇಬ್ಬರೂ ಗಾಯಗೊಂಡರು. ಗಂಭೀರ ಸ್ಥಿತಿಯಲ್ಲಿದ್ದ ಅಶ್ರಫ್‌ ಅವರನ್ನು ತತ್‌ಕ್ಷಣ ಮಂಗಳೂರು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಬಂಟ್ವಾಳ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿ.ಸಿ. ರೋಡ್‌-ಕೈಕಂಬ ಮಧ್ಯದ ಈ ಪ್ರದೇಶವು ಸಾಕಷ್ಟು ಅಪಾಯಕಾರಿ ಯಾಗಿದ್ದು, ಈ ಹಿಂದೆಯೂ ಸಾಕಷ್ಟು ಅಪಘಾತಗಳು ಸಂಭವಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next