Advertisement

ಹೋಮ್ ಕ್ವಾರೆಂಟೆನ್ ಗೆ ಒಳಗಾದ ಕೃಷಿ ಸಚಿವ ಬಿ.ಸಿ. ಪಾಟೀಲ್ !

12:45 PM Jul 13, 2020 | sudhir |

ಕೊಪ್ಪಳ: ಬೆಂಗಳೂರಿನ ಸಚಿವರ ನಿವಾಸದಲ್ಲಿ ಕೃಷಿ ಸಚಿವ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ ಸಿ ಪಾಟೀಲ್ ಅವರ ಸಂಬಂಧಿಗೆ ಕೋವಿಡ್ ಪಾಜಿಟಿವ್ ಬಂದ ಹಿನ್ನೆಲೆಯಲ್ಲಿ ಸಚಿವ ಬಿ ಸಿ ಪಾಟೀಲ್ ಅವರು ಹಿರೇಕೆರೂರು ಸ್ವಂತ ನಿವಾಸದಲ್ಲಿ ಕ್ವಾರೆಂಟೆನ್ ಗೆ ಒಳಗಾಗಿದ್ದಾರೆ.

Advertisement

ಈ ಕುರಿತು ಅವರು ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು, ನಾನು ನನ್ನ ಸಂಬಂಧಿಯ ಸಂಪರ್ಕಕ್ಕೆ ಬಂದಿದ್ದೇನೆ. ಹಾಗಾಗಿ ಹಿರೇ ಕೆರೂರಿನಲ್ಲಿ ನಾನು ಕ್ವಾರೆಂಟೆನ್ ಗೆ ಒಳಗಾಗಿದ್ದೇನೆ. ನಮ್ಮ ಕುಟುಂಬ ಹಾಗೂ ಸಿಬ್ಬಂದಿ ವರ್ಗವು ಬೆಂಗಳೂರಿನಲ್ಲಿ ಕ್ವಾರೆಂಟೆನ್ ಗೆ ಒಳಗಾಗಿದ್ದಾರೆ ಎಂದು ಟ್ವಿಟರ್ ನಲ್ಲಿ ತಿಳಿಸಿದ್ದಾರೆ.

ಜು.13 ರಂದು ಅವರು ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅಲ್ಲದೆ ಜಿಲ್ಲಾ ಕೋವಿಡ್- 19 ನಿಯಂತ್ರಣದ ಕುರಿತು ಅಧಿಕಾರಿಗಳ ಸಭೆ ನಡೆಸಲಿದ್ದರು. ಆದರೆ ಅವರು ಕ್ವಾರೆಂಟೆನ್ ಗೆ ಒಳಗಾದ ಹಿನ್ನೆಲೆಯಲ್ಲಿ ಇಂದಿನ ಎಲ್ಲ ಕಾರ್ಯಕ್ರಮ ರದ್ದಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next