Advertisement

BBK11: ಬಿಗ್ ಬಾಸ್ ಮನೆಗೆ ಬಂದು ಧಿಕ್ಕಾರ ಹಾಕಿದ ಜನಸಾಮಾನ್ಯರು..! ಅಂಥದ್ದೇನಾಯಿತು?

12:30 PM Oct 25, 2024 | Team Udayavani |

ಬೆಂಗಳೂರು: ಬಿಗ್ ಬಾಸ್(Bigg Boss Kannada-11) ಕಾರ್ಯಕ್ರಮದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಜನ ಸಾಮಾನ್ಯರು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

Advertisement

ಈ ವಾರ ದೊಡ್ಮನೆಯಲ್ಲಿ ಸ್ಪರ್ಧಿಗಳು ರಾಜಕೀಯ ಪಕ್ಷಗಳಾಗಿ ರೂಪುಗೊಂಡಿದ್ದಾರೆ. ಪ್ರಾಮಾಣಿಕ, ಸಮರ್ಥರ ನ್ಯಾಯವಾದಿ ಪಕ್ಷ ಹಾಗೂ ಧರ್ಮಪರ ಸೇನಾ ಪಕ್ಷ ಎಂದು ಎರಡು ಪಕ್ಷಗಳನ್ನು ರಚನೆ ಮಾಡಲಾಗಿದೆ.

ಒಂದು ಪಕ್ಷದ ಅಧ್ಯಕ್ಷರಾಗಿ ಐಶ್ವರ್ಯಾ ಹಾಗೂ ಇನ್ನೊಂದು ಪಕ್ಷದ ಅಧ್ಯಕ್ಷರಾಗಿ ತಿವಿಕ್ರಮ್ ಅವರು ಆಯ್ಕೆ ಆಗಿದ್ದಾರೆ. ಉಳಿದವರು‌ ಆಯಾ ಪಕ್ಷದ ಮುಖಂಡರಾಗಿ ಕಾಣಿಸಿಕೊಂಡಿದ್ದಾರೆ.

ವಿವಿಧ ಹಂತದಲ್ಲಿ ಪೋಸ್ಟರ್ ಅಂಟಿಸುವ ಟಾಸ್ಕ್ ಗಳನ್ನು ನೀಡಲಾಗಿದೆ. ಆದರೆ ಎರಡು ಪಕ್ಷಗಳ‌ ನಡುವಿನ ಕಿತ್ತಾಟ ತಾರಕಕ್ಕೇರಿದ ಬೆನ್ನಲ್ಲೇ ಎರಡು ಹಂತದಲ್ಲಿ  ಟಾಸ್ಕ್ ನಡೆದು ಫಲಿತಾಂಶ ಹೊರಬಿದ್ದಿಲ್ಲ.

Advertisement

ರಾಜಕೀಯ ಅಂದ್ಮೇಲೆ ಸಮಾವೇಶಕ್ಕೆ ಜನ ಸಾಮಾನ್ಯರು ಬರಲೇಬೇಕಲ್ವಾ? ಹಾಗಾಗಿ ಬಿಗ್ ಬಾಸ್ ಮನೆಯ ರಾಜಕೀಯ ಸಮಾವೇಶಕ್ಕೆ ಜನ ಸಾಮಾನ್ಯರ ದಂಡೇ ಹರಿದು ಬಂದಿದೆ.

ಜನ ಸಾಮಾನ್ಯರ ದಂಡು ಬಿಗ್ ಬಾಸ್ ಮನೆಗೆ ಲಗ್ಗೆ ಇಟ್ಟಿದ್ದು ಆಯಾ ರಾಜಕೀಯ ಪಕ್ಷಗಳ ಸ್ಪರ್ಧಿಗಳಿಗೆ ಜೈಕಾರ ಹಾಕಿ ಪ್ರಶ್ನೆಗಳನ್ನು ಕೇಳಿದ್ದಾರೆ.

ತಿವಿಕ್ರಮ್ ಅವರು ಜನ ಸಾಮಾನ್ಯರನ್ನು ನೋಡಿ ತುಂಬಾ ದಿನಗಳ ಬಳಿಕ ನನ್ನ ಅಕ್ಕ, ತಾಯಿ ನೆನಪು ಆಗ್ತಾ ಇದ್ದಾರೆ ಎಂದಿದ್ದಾರೆ.

ಇನ್ನೊಂದೆಡೆ ಹನುಮಂತು ಅವರಿಗೆ ಜನ ಸಾಮಾನ್ಯರೊಬ್ಬರು ಪಂಚೆ ಎಲ್ಲಿಟ್ಟಿದ್ದೀಯಾ ಅಣ್ಣಾ ಎಂದಿದ್ದಾರೆ.

ನಿಮ್ಮ ಕಣ್ಣಿನಿಂದ ಇಡೀ ಕರ್ನಾಟಕವೇ ಭಯ ಬೀಳ್ತಿದೆ ಅಂಥ ಮಾನಸ ಅವರಿಗೆ ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ.

ಇದಲ್ಲದೆ ಜನರೆಲ್ಲರೂ ಮನೆಯೊಳಗೆ ಧಿಕ್ಕಾರ ಧಿಕ್ಕಾರ ಎಂದು ಕೂಗಿರುವುದನ್ನು ಪ್ರೋಮೊದಲ್ಲಿ ತೋರಿಸಲಾಗಿದೆ.

ಇಂದು ರಾತ್ರಿ(ಅ.25ರಂದು) ಈ ಸಂಚಿಕೆ ಪ್ರಸಾರವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next