Advertisement

ಸಂಪ್ರದಾಯದಂತೆ ಬಸ್‌ಗಳ ಪೂಜೆ

10:53 AM Oct 13, 2021 | Team Udayavani |

ಬೆಂಗಳೂರು: ಆಯುಧ ಪೂಜೆ ದಿನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಎÇÉಾ ಬಸ್‌ಗಳು, ವಾಹನಗಳು ಮತ್ತು ಯಂತ್ರೋಪಕರ ಣ ಗಳನ್ನು ಸುಸ್ಥಿತಿಯಲ್ಲಿಟ್ಟುಕೊಂಡು ಸಂಪ್ರದಾಯದಂತೆ ಪೂಜಿಸ ಬೇಕು ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.

Advertisement

ಪೂಜೆಗೆ ನೆರವಾಗುವಂತೆ ಪ್ರತಿ ವಾಹ ನಕ್ಕೆ 100 ರೂ. ಮತ್ತು ಪ್ರತಿ ವಿಭಾಗೀಯ ಕಾರ್ಯಾಗಾರಕ್ಕೆ 1,000 ರೂ. ಮುಂಗಡ ನಗದು ಪಡೆದು ಈ ಪೂಜಾ ಕಾರ್ಯಕ್ಕೆ ಎಂದಿನಂತೆ ವಿನಿಯೋಗಿಸಿ, ಆಚರಿಸ ಬೇಕು ಎಂದು ತಿಳಿಸಿದ ಸಚಿ ವರು, ರಾಜ್ಯದ ಸಮಸ್ತ ಜನ ತೆಗೆ, ಸಾರಿಗೆ ನೌಕರರಿಗೆ, ಅಧಿ ಕಾ ರಿ ಗಳಿಗೆ ನಾಡಹಬ್ಬದ ಶು ಭಾಶಯಗಳನ್ನು ತಿಳಿಸಿದ್ದಾರೆ.

ನಾಡದೇವತೆ ಚಾಮುಂಡೇ ಶ್ವರಿ ಎಲ್ಲರಿಗೂ ಸುಖ, ಸಂತೋಷ, ಆರೋಗ್ಯವನ್ನು ಅನುಗ್ರಹಿಸಲಿ. ಸಾಂಕ್ರಾಮಿಕ ರೋಗದ ಕರಿನೆರಳು ದೂರ ಸರಿದು, ಸಂಭ್ರಮ ಸಮೃದ್ಧಿಗಳ ಹೊಂಗಿರಣ ಮೂಡಲಿ ಎಂದು ಸಚಿವರು ಹಾರೈಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next