Advertisement

Basrur: ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನ- ಫೆ. 14ರಂದು ಬ್ರಹ್ಮರಥೋತ್ಸವ

12:06 AM Feb 08, 2024 | Team Udayavani |

ಉಡುಪಿ: ಬಸ್ರೂರು ಮಂಡಿಕೇರಿಯ 475 ವರ್ಷ ಇತಿಹಾಸ ವುಳ್ಳ ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದ 15ನೇ ವರ್ಷದ ಬ್ರಹ್ಮರಥೋತ್ಸವ ಫೆ. 14ರಂದು ಜರಗಲಿದೆ.
ಶ್ರೀದೇವಿಗೆ ಪಂಚಾಮೃತ ಅಭಿ ಷೇಕ, ಕನಕಾಭಿಷೇಕ, ತುಲಾಭಾರ ಸೇವೆ, ಯಜ್ಞವಿಧಿಗಳು, ಪ್ರಾರ್ಥನೆ, ಮಹಾಪೂಜೆ, ಮಹಾ ಬಲಿಪ್ರದಾನ, ಸಂಜೆ ರಥಾರೋಹಣ, ಸಮಾರಾಧನೆ ಅನಂತರ ರಥೋತ್ಸವ, ಚೆಂಡೆ ವಾದನ, ಆಕರ್ಷಕ ಸುಡುಮದ್ದು ಪ್ರದರ್ಶನ, ಸಾಂಸ್ಕೃತಿಕ ಕಾರ್ಯ ಕ್ರಮ ಜರಗಲಿವೆ.

Advertisement

ಫೆ. 11ರಿಂದ 15ರ ತನಕ ವಿವಿಧ ಧಾರ್ಮಿಕ ಕ್ರಿಯೆಗಳು ನೆರವೇರಲಿದ್ದು, ಫೆ. 15ರಂದು ಅವಭೃಥ ಉತ್ಸವ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next