Advertisement

ಬಸವರಾಜ ಬೊಮ್ಮಾಯಿ ಸಚಿವ ಸಂಪುಟ ಪಟ್ಟಿ ಅಂತಿಮ: ಯಾರು ಇನ್, ಯಾರು ಔಟ್?

12:22 PM Aug 04, 2021 | Team Udayavani |

ಬೆಂಗಳೂರು: ಭಾರತೀಯ ಜನತಾ ಪಕ್ಷದ ಜತೆ ದೀರ್ಘ ಮಾತುಕತೆ, ಚರ್ಚೆಯ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟ ಸೇರುವ ಶಾಸಕರ ಪಟ್ಟಿ ಅಂತಿಮವಾಗಿದೆ. ಅಲ್ಲದೇ ಯಾರೆಲ್ಲಾ ಸಚಿವ ಸಂಪುಟದಲ್ಲಿ ನೂತನವಾಗಿ ಸೇರ್ಪಡೆಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ, ಯಾರಿಗೆ ಮಂತ್ರಿ ಪಟ್ಟ ಕೈತಪ್ಪಿದೆ ಎಂಬ ವಿವರ ಇಲ್ಲಿದೆ…

Advertisement

ಒಟ್ಟು 29 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಆದರೆ ಈ ಬಾರಿ ಯಾವುದೇ ಡಿಸಿಎಂ ಹುದ್ದೆಗೆ ಅವಕಾಶ ಇಲ್ಲ ಎಂದು ಹೈಕಮಾಂಡ್ ತೀರ್ಮಾನ ಮಾಡಿರುವುದಾಗಿ ಸಿಎಂ ಬೊಮ್ಮಾಯಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಅರವಿಂದ್ ಲಿಂಬಾವಳಿ, ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರನ್ನು ಸಚಿವ ಸಂಪುಟದಿಂದ ಕೈಬಿಡಲಾಗಿದೆ.

8 ಲಿಂಗಾಯತರು, 7 ಒಬಿಸಿ, 7 ಒಕ್ಕಲಿಗರು, 1 ಪರಿಶಿಷ್ಟ ಪಂಗಡ, 3 ಪರಿಶಿಷ್ಟ ಜಾತಿ, 1 ರೆಡ್ಡಿ, 1 ಮಹಿಳಾ, 1 ಬ್ರಾಹ್ಮಣ ವರ್ಗದವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ. ರಾಜ್ಯಪಾಲರಿಗೆ ಕಳುಹಿಸಿರುವ ಪಟ್ಟಿಯಲ್ಲಿ ಬಿವೈ ವಿಜಯೇಂದ್ರಗೆ ಸಚಿವ ಸ್ಥಾನ ಇಲ್ಲ ಎಂದು ಖುದ್ದು ಸಿಎಂ ತಿಳಿಸಿದ್ದಾರೆ.

ಕೈತಪ್ಪಿದ ಸಚಿವಪಟ್ಟ:

Advertisement

ಆರ್ ಶಂಕರ್

ಸಿಪಿ ಯೋಗೀಶ್ವರ್

ಅರವಿಂದ್ ಲಿಂಬಾವಳಿ

ಶ್ರೀಮಂತ ಪಾಟೀಲ್

ಸುರೇಶ್ ಕುಮಾರ್

ಜಗದೀಶ್ ಶೆಟ್ಟರ್

ಲಕ್ಷ್ಮಣ ಸವದಿ

ಬೊಮ್ಮಾಯಿ ಸಂಪುಟದ ಪಟ್ಟಿ
ಕೋಟಾ ಶ್ರೀನಿವಾಸ ಪೂಜಾರಿ – ಎಂಎಲ್‍ಸಿ
ಸುನೀಲ್ ಕುಮಾರ್ – ಕಾರ್ಕಳ
ಎಸ್ ಅಂಗಾರ-ಸುಳ್ಯ
ಕೆ.ಎಸ್.ಈಶ್ವರಪ್ಪ -ಶಿವಮೊಗ್ಗ
ಆರ್.ಅಶೋಕ್- ಪದ್ಮನಾಭ ನಗರ

ವಿ ಸೋಮಣ್ಣ – ಗೋವಿಂದರಾಜನಗರ
ಡಾ.ಸಿ.ಎನ್.ಅಶ್ವತ್ಥ ನಾರಾಯಣ – ಮಲ್ಲೇಶ್ವರ
ಉಮೇಶ್ ಕತ್ತಿ- ಹುಕ್ಕೇರಿ,
ಎಸ್.ಟಿ.ಸೋಮಶೇಖರ್- ಯಶವಂತಪುರ
ಡಾ.ಕೆ.ಸುಧಾಕರ್ – ಚಿಕ್ಕಬಳ್ಳಾಪುರ

ಸಿ.ಸಿ.ಪಾಟೀಲ್ – ನರಗುಂದ
ಬೈರತಿ ಬಸವರಾಜ – ಕೆ ಆರ್ ಪುರಂ
ಮುರುಗೇಶ್ ನಿರಾಣಿ – ಬೀಳಗಿ
ಶಿವರಾಂ ಹೆಬ್ಬಾರ್- ಯಲ್ಲಾಪುರ
ಶಶಿಕಲಾ ಜೊಲ್ಲೆ- ನಿಪ್ಪಾಣಿ
ಕೆಸಿ ನಾರಾಯಣಗೌಡ – ಕೆಆರ್ ಪೇಟೆ
ಅರಗ ಜ್ಞಾನೇಂದ್ರ – ತೀರ್ಥಹಳ್ಳಿ

ಬಿ.ಶ್ರೀ ರಾಮುಲು- ಮೊಳಕಾಲ್ಮೂರು
ಗೋವಿಂದ ಕಾರಜೋಳ-ಮುಧೋಳ
ಮುನಿರತ್ನ- ಆರ್ ಆರ್ ನಗರ
ಎಂ.ಟಿ.ಬಿ ನಾಗರಾಜ್ – ಎಂಎಲ್‍ಸಿ
ಗೋಪಾಲಯ್ಯ- ಮಹಾಲಕ್ಷ್ಮಿ ಲೇಔಟ್

ಮಾಧುಸ್ವಾಮಿ- ಚಿಕ್ಕನಾಯಕನಹಳ್ಳಿ
ಹಾಲಪ್ಪ ಆಚಾರ್ – ಯಲ್ಬುರ್ಗ
ಶಂಕರ್ ಪಾಟೀಲ್ ಮುನೇನಕೊಪ್ಪ – ನವಲುಗುಂದ
ಪ್ರಭು ಚೌವ್ಹಾಣ್ – ಔರಾದ್
ಆನಂದ್ ಸಿಂಗ್ – ಹೊಸಪೇಟೆ
ಬಿ.ಸಿ.ನಾಗೇಶ್ – ತಿಪಟೂರು

ಯಾವುದೇ ರೀತಿಯ ಗೊಂದಲ ಇಲ್ಲ: ಬೊಮ್ಮಾಯಿ

ಸಚಿವ ಸಂಪುಟದ ಬಗ್ಗೆ ಯಾವುದೇ ರೀತಿಯ ಗೊಂದಲ ಇಲ್ಲ ಎಂದು ದೆಹಲಿಯಿಂದ ವಾಪಸ್ ಆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ. ಹೈಕಮಾಂಡ್ ಸೂಚನೆ ಬಂದ ತಕ್ಷಣ ರಾಜ್ಯಪಾಲರಿಗೆ ಪಟ್ಟಿಯನ್ನು ರವಾನಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next