Advertisement

ಪೊಲೀಸ್‌ ಇಲಾಖೆಯ ಅಕ್ರಮಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಕಿಡಿ

01:16 AM Dec 12, 2022 | Team Udayavani |

ಬೆಂಗಳೂರು : ಪೊಲೀಸ್‌ ನೇಮಕಾತಿಯಲ್ಲಿ ಆಗುತ್ತಿರುವ ಅಕ್ರಮಗಳನ್ನು ತಡೆಯಲು ಕಠಿನ ಕ್ರಮ ಕೈಗೊಳ್ಳಬೇಕು ಎಂದಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಅದಕ್ಕಾಗಿ ಕಾನೂನು ಬದಲಾವಣೆ ಅಥವಾ ತಂತ್ರ ಜ್ಞಾನ ಬಳಕೆ ಮಾಡಲು ಗೃಹ ಇಲಾಖೆ ಮುಂದಾಗ ಬೇಕು ಎಂದು ಸ್ಪಷ್ಟ ಸೂಚನೆ ನೀಡಿದ್ದಾರೆ.

Advertisement

ರಾಜ್ಯ ಪೊಲೀಸ್‌ ಇಲಾಖೆಯಿಂದ ಆಯೋಜಿಸಲಾಗಿದ್ದ ರಾಷ್ಟ್ರಪತಿಗಳ ಪೊಲೀಸ್‌ ಪದಕ ಪ್ರದಾನ ಸಮಾರಂಭ 2022ರಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪೊಲೀಸ್‌ ನೇಮಕಾತಿಯಲ್ಲಿ ಅಕ್ರಮ ಅಸಹ ನೀಯ. ಅಪರಾಧ ತಡೆಯ ಬೇಕಾದವರ ನೇಮಕಾತಿಯಲ್ಲಿಯೇ ಅಕ್ರಮ ಸಹಿಸಲಸಾಧ್ಯ. ಪೊಲೀಸ್‌ ನೇಮಕಾತಿ ವಿಭಾಗವನ್ನು ಗಟ್ಟಿ ಗೊಳಿಸುವ ಕೆಲಸವಾಗಬೇಕು. ಅದಕ್ಕಾಗಿ ಉತ್ತಮ ಮತ್ತು ದಕ್ಷ ಪೊಲೀಸರ ಆಯ್ಕೆಗಾಗಿ ಅಗತ್ಯವಿದ್ದರೆ ಕಾನೂನಿನಲ್ಲಿ ಬದಲಾವಣೆ ತರಬೇಕು. ಜತೆಗೆ ಹೊಸ ತಂತ್ರಜ್ಞಾನ ಬಳಸಿ ನೇಮಕಾತಿ ಅಕ್ರಮ ತಡೆಯಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next