Advertisement

ಉಮೇಶ ಕತ್ತಿ ಸೀನಿಯರ್ ಆಗಿದಾರೆ, ಇನ್ನು ರಮೇಶ ಕತ್ತಿ ಜೊತೆಗೆ ನಮ್ಮ‌‌ ದೋಸ್ತಿ: ಬೊಮ್ಮಾಯಿ

11:40 PM Sep 25, 2021 | Team Udayavani |

ಬೆಳಗಾವಿ: ಜನರ ನಾಡಿಮಿಡಿತ ಅರಿತಿರುವ ರಮೇಶ ಕತ್ತಿ ಕ್ರಿಯಾಶೀಲ ನಾಯಕರು. ಉಮೇಶ ಸೀನಿಯರ್ ಆಗಿದ್ದಾರೆ.‌ ನಮ್ಮ‌ದೋಸ್ತಿ ರಮೇಶ ಕತ್ತಿ ಅವರ ಜೊತೆಗೆ ಆಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳುವ ಮೂಲಕ ಜನರನ್ನು ನಗೆಗಡಲಲ್ಲಿ ತೇಲಿಸಿದರು.‌

Advertisement

ಹುಕ್ಕೇರಿಯ ಕ್ಯಾರಗುಡ್ಡದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡ, ಪ್ರಥಮ ದರ್ಜೆ ಕಾಲೇಜು, ಹುಕ್ಕೇರಿಯ ಹೈಟೆಕ್ ನೂತನ‌ ಬಸ್ ನಿಲ್ದಾಣ ಸೇರಿದಂತೆ ಒಟ್ಟು 40.40 ಕೋಟಿ ರೂ.‌ ಮೊತ್ತದ ಅಭಿವೃದ್ಧಿ ಕಾಮಗಾರಿಗಳನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿ,

ಉಮೇಶ ಕತ್ತಿ ಬಂದರೆ ನಮಗೆ ಬೇಸರ ಆಗುವುದಿಲ್ಲ. ಕ್ರೀಯಾಶೀಲ ಆಗಿರುವ ರಮೇಶ ಕತ್ತಿ ಬಂದರೆ ಏನಾದರೂ ಕೆಲಸ ತೆಗೆದುಕೊಂಡೇ ಬರುತ್ತಾರೆ ಎಂಬ ಅಳುಕು ಇದೆ.‌ ಬಹಳ ಕ್ರಿಯಾಶೀಲ ನಾಯಕರು ಎಂದು ಸಹೋದರರನ್ನು ಹೊಗಳಿದರು.

ಇದನ್ನೂ ಓದಿ :ಆರ್ಚರಿ ವಿಶ್ವ ಚಾಂಪಿಯನ್‌ಶಿಪ್‌ : ಅವಳಿ ಬೆಳ್ಳಿಗೆ ಭಾರತ ಸಮಾಧಾನ

Advertisement

Udayavani is now on Telegram. Click here to join our channel and stay updated with the latest news.

Next