Advertisement

ಪ್ರತ್ಯೇಕ ಧರ್ಮವಾದರೆ ಬಸವಧರ್ಮ ಸೇರುವೆ 

06:50 AM Jan 12, 2018 | Team Udayavani |

ಕೂಡಲಸಂಗಮ/ ಬಾಗಲಕೋಟೆ: “ಲಿಂಗಾಯತ ಪ್ರತ್ಯೇಕ ಧರ್ಮ ಆಗಬೇಕು ಎಂಬುದಕ್ಕೆ ನನ್ನ ವೈಯಕ್ತಿಕ ಬೆಂಬಲವಿದೆ. ಮಾದಿಗರು ಹಾಗೂ ಲಿಂಗಾಯತರ ಮಧ್ಯೆ ಅವಿನಾಭಾವ ಸಂಬಂಧವಿದೆ.

Advertisement

ಹೀಗಾಗಿ, ಲಿಂಗಾಯತ ಪ್ರತ್ಯೇಕ ಧರ್ಮ ಆದರೆ ನಾನು ಬಸವ ಧರ್ಮ ಸೇರುತ್ತೇನೆ’ ಎಂದು ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ಹೇಳಿದರು.

ಬಸವಣ್ಣನವರ ಐಕ್ಯಸ್ಥಳಕ್ಕೆ ಗುರುವಾರ ಭೇಟಿ ನೀಡಿ, ದರ್ಶನ ಪಡೆದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ,
“ಬಸವಣ್ಣನವರು ಮಾದಾರ ಚೆನ್ನಯ್ಯನವರನ್ನು ಅಪ್ಪ ಎಂದು ಕರೆದು, ಬಹುದೊಡ್ಡ ಗೌರವ ಕೊಟ್ಟಿದ್ದರು. ಹೀಗಾಗಿ ಬಸವ ಧರ್ಮ ಪ್ರತ್ಯೇಕ ಧರ್ಮವಾದರೆ ನಾನು ಕೂಡ ಬಸವ ಧರ್ಮ ಸೇರುತ್ತೇನೆ. ನಮ್ಮ ಮನೆಯಲ್ಲಿ ಲಿಂಗಾಯತ ಧರ್ಮವನ್ನೇ ಪಾಲಿಸುತ್ತಿದ್ದೇವೆ. ದೇವರ ಜಗಲಿ ಮೇಲೆ ಬಸವಣ್ಣ, ಬುದ್ಧ, ಅಂಬೇಡ್ಕರ್‌,ಗಾಂಧೀಜಿಯವರ ಫೋಟೋ ಇಟ್ಟು ನಾನು ಪೂಜೆ ಮಾಡುತ್ತೇನೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next