Advertisement

ಸಿದ್ದು ಹೊರತುಪಡಿಸಿ ಉಳಿದ ಕಾಂಗ್ರೆಸ್‌ ನಾಯಕರು ಗೂಂಡಾಗಳು: ಯತ್ನಾಳ್‌

11:25 PM May 09, 2022 | Team Udayavani |

ಕಲಬುರಗಿ: ಕಾಂಗ್ರೆಸ್‌ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೊರತುಪಡಿಸಿದರೆ ಉಳಿದೆಲ್ಲರೂ ಗೂಂಡಾಗಳೇ ಇದ್ದಾರೆ. ಇಂಥವರ ಕೈಯಲ್ಲಿ ಪಕ್ಷವನ್ನು ನೀಡಿ ಸೋನಿಯಾ ನಿದ್ದೆ ಮಾಡುತ್ತಿದ್ದಾರೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಟೀಕಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು, ಬಿ.ಕೆ.ಹರಿಪ್ರಸಾದ್‌ ದೇಶದ ಆಂತರಿಕ ಭಯೋತ್ಪಾದಕ. ಇಂಥವರಿಂದಾಗಿ ಪಕ್ಷ ಹಳ್ಳ ಹಿಡಿಯು ತ್ತಿದೆ. ಸಿದ್ದರಾಮಯ್ಯ ಇದ್ದಾರೆನ್ನುವ ಕಾರಣಕ್ಕೆ ಜನರು ಇನ್ನೂ ಕಾಂಗ್ರೆಸ್‌ ಕುರಿತು ಒಳ್ಳೆಯ ಅಭಿಪ್ರಾಯ ಹೊಂದಿದ್ದಾರೆ ಎಂದರು.

ಆರಗ ಜ್ಞಾನೇಂದ್ರ ಅವರೇ ನಿಮಗಿದು ತೂಗೋ ಖಾತೆಯಲ್ಲ, ನೀಗಿಸಿಕೊಂಡು ಹೋಗುವುದಲ್ಲ. ಕಂದಾಯ ಇಲ್ಲವೇ ಅರಣ್ಯ ಖಾತೆ ತಗೋರಿ. ಯಾರಾದ್ರೂ ಗಟ್ಟಿ ಇದ್ದವರಿಗೆ ಇದನ್ನು ಕೊಡಿ ಎಂದು ಸಲಹೆ ಕೊಟ್ಟಿದ್ದೆ. ಈಗ ನೋಡಿದರೆ ಅವರು ಶಕ್ತಿ ಮೀರಿ ಶ್ರಮಿಸಬೇಕಿದೆ. ಈಗಲೂ ಕಾಲ ಮಿಂಚಿಲ್ಲ. ಖಾತೆ ಬದಲಿಸಬಹುದಾಗಿದೆ ಎಂದರು.

ಮಂಗಳವಾರ ಸಿಎಂ ದಿಲ್ಲಿಗೆ ಹೊರಟಿದ್ದಾರೆ. ಸಚಿವ ಸಂಪುಟವೋ ಮತ್ತೊಂದು, ಮೊಗದೊಂದೋ ನನಗೆ ಗೊತ್ತಿಲ್ಲ. ಆದರೆ, ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಕುರಿತು ಅವರಿಗೆ ವರಿಷ್ಠರು ಬುದ್ಧಿವಾದ ಹೇಳಿ ಖಾತೆ ನಿರ್ವಹಣೆ ಮತ್ತು ಸಾಂದರ್ಭಿಕ ಘಟನೆಗಳ ನಿರ್ವಹಣೆ ಕುರಿತು ತಿಳಿವಳಿಕೆ ನೀಡಿದರೆ ಸಾಕು.
-ಬಸವನಗೌಡ ಪಾಟೀಲ್‌ ಯತ್ನಾಳ್‌, ವಿಜಯಪುರ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next