Advertisement

ಬಾಲ್ಯವಿವಾಹಗಳಿಗೆ ತಡೆ

09:19 AM Jun 27, 2020 | Suhan S |

ಬಳ್ಳಾರಿ: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಮುನ್ನಾ ದಿನ ವಿದ್ಯಾರ್ಥಿನಿಯ ಬಾಲ್ಯವಿವಾಹ ತಡೆದಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಬೇಕಿದ್ದ ಮತ್ತೂಬ್ಬ ವಿದ್ಯಾರ್ಥಿನಿ ಸೇರಿ ಮೂರು ಬಾಲ್ಯ ವಿವಾಹಗಳನ್ನು ಶುಕ್ರವಾರ ತಡೆದಿದ್ದು, ಈ ಮೂಲಕ ಎರಡು ದಿನದಲ್ಲಿ ನಾಲ್ಕು ಬಾಲ್ಯವಿವಾಹಗಳನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ನಗರದ ಹೊರವಲಯದ ಅಲ್ಲಿಪುರದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಗೆ (16) ಶುಕ್ರವಾರ ನಡೆಯಲಿದ್ದ ಬಾಲ್ಯವಿವಾಹವನ್ನು ತಡೆದು ಪರೀಕ್ಷೆ ಬರೆಯಲು ಅನುವು ಮಾಡಲಾಗಿತ್ತು. ಕಂಪ್ಲಿ ಸಮೀಪದ ಮುದ್ದಾಪುರ ಗ್ರಾಮದ ಸಂಬಂಧಿಕರ ಯುವಕನೊಂದಿಗೆ ನಿಶ್ಚಯಿಸಿದ್ದ ಮದುವೆಯನ್ನು ತಡೆದು ವಿದ್ಯಾರ್ಥಿನಿಯನ್ನು ರಕ್ಷಿಸಿ, ಎರಡು ದಿನ ಬಾಲಮಂದಿರದಲ್ಲಿ ಆಶ್ರಯ ನೀಡಿದ್ದರು. ಪರೀಕ್ಷಾ ಸಿದ್ಧತೆಗೆಂದು ವಿದ್ಯಾರ್ಥಿನಿಯನ್ನು ಪೋಷಕರ ಬಳಿ ಮುಚ್ಚಳಿಕೆ ಬರೆಸಿಕೊಂಡು ಶುಕ್ರವಾರ ಮನೆಗೆ ಕಳಿಸಲಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಲಾಲಪ್ಪ ತಿಳಿಸಿದರು.

ಇಲ್ಲಿನ ವಿನಾಯಕ ನಗರದಲ್ಲಿ 14 ವರ್ಷದ ಮತ್ತು ಗುಗ್ಗರಹಟ್ಟಿ ಪ್ರದೇಶದಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ (17) ಸಂಬಂಧಿಕರ ಯುವಕನೊಂದಿಗೆ ಹಾಗೂ 16 ವರ್ಷದ ಬಾಲಕಿಯರಿಗೆ ಶುಕ್ರವಾರ ನಡೆಯಲಿದ್ದ ಮೂರು ಬಾಲ್ಯ ವಿವಾಹಗಳನ್ನು ಶುಕ್ರವಾರ ತಡೆದು ಪೋಷಕರಿಂದ ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲಾಗಿದೆ ಎಂದು ಸಿಡಿಪಿಒ ಜಲಾಲಪ್ಪ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next