Advertisement

ಬಾರಾಬಂಕಿ ವಿಷ ಮದ್ಯ ದುರಂತ; ಮುಖ್ಯ ಆರೋಪಿಯ ಮೇಲೆ ಫೈರಿಂಗ್‌

09:39 AM May 30, 2019 | Vishnu Das |

ಬಾರಾಬಂಕಿ, ಉತ್ತರ ಪ್ರದೇಶ : ಬಾರಾಬಂಕಿ ಜಿಲ್ಲೆಯ ರಾಮನಗರದಲ್ಲಿ ವಿಷ ಕಾರಿ ಮದ್ಯ ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ 14ಕ್ಕೇರಿದೆ. ಇದೇ ವೇಳೆ ವಿಷ ಮದ್ಯ ಸರಬರಾಜು ಮಾಡಿದ ಪ್ರಮುಖ ಆರೋಪಿಯ ನ್ನು ಬುಧವಾರ ಪೊಲೀಸರು ಫೈರಿಂಗ್‌ ನಡೆಸಿ ವಶಕ್ಕೆ ಪಡೆದಿದ್ದಾರೆ.

Advertisement

ಮದ್ಯ ಸೇವಿಸಿದ ಇನ್ನೂ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು,40 ಕ್ಕೂ ಹೆಚ್ಚು ಮುಂದಿಗೆ ಚಿಕಿತ್ಸೆ ಮುಂದುವರಿದಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಎಲ್ಲಾ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

ಪ್ರಮುಖ ಆರೋಪಿ ಪಪ್ಪು ಜೈಸ್ವಾಲ್‌ ಎಂಬಾತನ ಕಾಲಿಗೆಪೊಲೀಸರು ಗಂಡು ಹಾರಿಸಿ ವಶಕ್ಕೆ ಪಡೆದಿದ್ದಾರೆ.

ಇದುವರೆಗೆ 4 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಮದ್ಯದಂಗಡಿಯ ಮಾಲೀಕ ದಾನ್‌ವೀರ್‌ ಎಂಬಾತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ಧನಘೋಷಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next