Advertisement

ವಕೀಲರ ಬಂದ್‌ ನಿಷೇಧ ವಾಪ ಸ್‌ಗೆ ಸಿಜೆಐ ನಕಾರ

05:37 AM Oct 07, 2018 | Team Udayavani |

ಹೊಸದಿಲ್ಲಿ: ವಕೀಲರು ಬಂದ್‌ ನಡೆಸುವುದನ್ನು ನಿಷೇಧಿಸಿ 16 ವರ್ಷಗಳ ಹಿಂದೆ ಕೈಗೊಂಡ ನಿರ್ಧಾರವನ್ನು ಹಿಂಪಡೆಯುವ ಬಾರ್‌ ಕೌನ್ಸಿಲ್‌ ಪ್ರಸ್ತಾವನೆಯನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ತಳ್ಳಿಹಾಕಿದ್ದಾರೆ.

Advertisement

 ವಕೀಲರು ಯಾಕೆ ಬಂದ್‌ ನಡೆಸಬೇಕು? ಒಂದು ದಿನ ಕೋರ್ಟ್‌ಗೆ ವಕೀಲರು ಬಾರದಿದ್ದರೆ ಜನಸಾಮಾನ್ಯರ ಹಕ್ಕುಗಳಿಗೆ ಅಡಚಣೆ ಯಾಗುತ್ತದೆ. ಇದು ಜನರ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡುತ್ತದೆ ಎಂದು ಗೊಗೋಯ್‌ ಹೇಳಿದ್ದಾರೆ. ಇದೇ ವೇಳೆ ಗೊಗೋಯ್‌ ಅಭಿಪ್ರಾಯವನ್ನೇ ನ್ಯಾಯಮೂರ್ತಿ ಅರುಣ್‌ ಮಿಶ್ರಾ ಕೂಡ ವ್ಯಕ್ತಪಡಿಸಿದ್ದಾರೆ. 

ಪ್ರಜಾಪ್ರಭುತ್ವ ಅಪಾಯದಲ್ಲಿದ್ದಾಗ ಅಥವಾ ನ್ಯಾಯಾಂಗ ವ್ಯವಸ್ಥೆಯನ್ನು ಉಳಿಸುವುದಕ್ಕೆ ಮಾತ್ರವೇ ಬಂದ್‌ ನಡೆಸಬಹುದು. ಇತರ ಯಾವುದೇ ಸಮಯದಲ್ಲಿ ವಕೀಲರ ಬಂದ್‌ಗೆ ಬೆಂಬಲಿಸಲಾಗದು ಎಂದು ಮಿಶ್ರಾ ಹೇಳಿದ್ದಾರೆ. 2002ರಲ್ಲಿ ಈ ಸಂಬಂಧ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್‌ ವಕೀಲರಿಗೆ ಪ್ರತಿಭಟನೆ ನಡೆಸುವ ಹಕ್ಕಿಲ್ಲ ಎಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next