Advertisement
ಬಂಟ್ವಾಳ ತಾಲೂಕಿನ ಇರ್ವತ್ತೂರು ಗ್ರಾಮದ ಮೇಲ್ಪತ್ತರ ಸ.ಕಿ.ಪ್ರಾ.ಶಾಲೆಯ ಮೈದಾನದಲ್ಲಿದ್ದ ಈ ಬಾವಿ ಮಧ್ಯಾಹ್ನ ಸುಮಾರು 11 ಗಂಟೆಯ ಹೊತ್ತಿಗೆ ದಿಢೀರನೆ ಕುಸಿದಿದೆ.
Related Articles
ಬಂಟ್ವಾಳ: ನರಿಕೊಂಬು ಗ್ರಾಮದ ಮೊಗರ್ನಾಡು ರಥಬೀದಿ ಪರಿಸರದಲ್ಲಿ ಬುಧವಾರ ರಾತ್ರಿ ಸುರಿದ ಮಳೆಯ ಪರಿಣಾಮ ಗುಡ್ಡದ ನೀರು ಮನೆ ಹಾಗೂ ಇತರ ಅಂಗಡಿ ಮುಂಗಟ್ಟುಗಳಿಗೆ ನುಗ್ಗಿದೆ.
Advertisement
ರಥಬೀದಿಯಲ್ಲಿ ಬಾಡಿಗೆ ಮನೆ ಯೊಂದರಲ್ಲಿ ವಾಸವಾಗಿದ್ದ ಶ್ರೀಕಾಂತ್ ಅವರ ಮನೆಗೆ ನೀರು ನುಗ್ಗಿದ್ದು, ಮನೆಯಲ್ಲಿ ಶ್ರೀಕಾಂತ್ ದಂಪತಿ, ಇಬ್ಬರು ಮಕ್ಕಳು ಹಾಗೂ ತಂದೆ- ತಾಯಿ ಸಹಿತ ಹಲವರಿದ್ದರು. ಅವರೆಲ್ಲರೂ ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿದ್ದಾರೆ. ಅಲ್ಲೇ ಪಕ್ಕದ ಆಹಾರ ಉತ್ಪನ್ನ ಗೋದಾಮು ಹಾಗೂ ಹಲವು ಅಂಗಡಿಗಳಿಗೂ ನೀರು ನುಗ್ಗಿದೆ. ದಿವಾಕರ ಭಂಡಾರಿ ಅವರ ಮನೆಯ ಆವರಣಕ್ಕೂ ನೀರು ನುಗ್ಗಿದೆ.
ಮಣಿನಾಲ್ಕೂರು ಗ್ರಾಮದ ಅಜಿಲಮೊಗರು ಕುಟ್ಟಿಕಳ ಸರಕಾರಿ ಶಾಲೆಯ ಹಿಂಬದಿಯ ಬರೆ ಹಾಗೂ ಆವರಣ ಗೋಡೆ ಕುಸಿದು ಹಾನಿಯಾಗಿದ್ದು, ಶಾಲಾ ಕಟ್ಟಡಕ್ಕೆ ಆತಂಕ ಎದುರಾಗಿದೆ.
ನೇತ್ರಾವತಿ: ಹೆಚ್ಚಿದ ನೀರಿನ ಹರಿವುಉಪ್ಪಿನಂಗಡಿ: ಬುಧವಾರದ ಭಾರೀ ಮಳೆಗೆ ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಯು ಮೈ ತುಂಬಿ ಹರಿಯುತ್ತಿದೆ. ಪಶ್ಚಿಮಘಟ್ಟ ಪ್ರದೇಶದಲ್ಲೂ ತೀವ್ರ ಭಾರೀ ಮಳೆ ಆಗುತ್ತಿರುವುದರಿಂದ ನದಿಯ ನೀರಿನ ಮಟ್ಟದಲ್ಲಿ ಭಾರೀ ಹೆಚ್ಚಳ ಕಂಡು ಬಂದಿದೆ. ಸಮುದ್ರ ಮಟ್ಟಕ್ಕಿಂತ 26.1 ಮೀಟರ್ ಎತ್ತರದಲ್ಲಿ ನದಿಯ ನೀರಿನ ಹರಿವು ದಾಖಲಾಗಿದ್ದು, ಒಂದೇ ದಿನದಲ್ಲಿ 2 ಮೀಟರ್ನಷ್ಟು ನೀರು ಹೆಚ್ಚಳ ಕಂಡಿದೆ.