Advertisement

ಬಂಟ್ವಾಳ: ಭಿನ್ನಕೋಮಿನ ಯುವಕ-ಯುವತಿ ಪ್ರಯಾಣ; ಬಸ್‌ ತಡೆದ ಕಾರ್ಯಕರ್ತರು

03:38 PM Dec 16, 2022 | Team Udayavani |

ಬಂಟ್ವಾಳ: ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ಬಸ್ಸಿನಲ್ಲಿ ಭಿನ್ನಕೋಮಿನ ಯುವಕ ಹಾಗೂ ಯುವತಿ ಜತೆಯಾಗಿ ಪ್ರಯಾಣಿಸುತ್ತಿದ್ದಾರೆ ಎಂದು ಆರೋಪಿಸಿ ತಂಡವೊಂದು ಗುರುವಾರ ರಾತ್ರಿ ಸ್ಲೀಪರ್ ಕೋಚ್ ಬಸ್ಸನ್ನು ತಡೆದ ಘಟನೆ ಮಾಣಿ ಸಮೀಪದ ದಾಸಕೋಡಿಯಲ್ಲಿ ನಡೆದಿದೆ.

Advertisement

ಇದನ್ನೂ ಓದಿ:ಕುಸಿದ ಬಾಂಗ್ಲಾಗೆ ಗಿಲ್- ಪೂಜಾರ ಶತಕದೇಟು: 513 ರನ್ ಗುರಿ ನೀಡಿದ ಭಾರತ

ಮುಸ್ಲಿಂ ಯುವಕನ ಜತೆ ಹಿಂದೂ ಯುವತಿ ಪ್ರಯಾಣಿಸುತ್ತಿದ್ದಾಳೆ ಎಂದು ಆರೋಪಿಸಿ ಕಲ್ಲಡ್ಕ ವಿಹಿಂಪ, ಬಜರಂಗದಳ ಸಂಘಟನೆಯ ಕಾರ್ಯಕರ್ತರು ಬಸ್ಸನ್ನು ತಡೆದು ಅವರಿಬ್ಬರನ್ನೂ ಬಸ್ಸಿನಿಂದ ಇಳಿಸಿ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ಒಪ್ಪಿಸಿರುವ ಘಟನೆ ನಡೆದಿರುವುದಾಗಿ ಮೂಲಗಳು ತಿಳಿಸಿವೆ.

ಪ್ರಸ್ತುತ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಯ ಸಂದರ್ಭದಲ್ಲಿ ಯುವತಿ ಹಾಗೂ ಸಂಘಟನೆಯ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ಘಟನೆಯ ಕುರಿತು ಪ್ರಕರಣ ದಾಖಲಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next