Advertisement

ಬಂಟ್ವಾಳ : ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಬಾವಿಗೆ ಬಿದ್ದು ವ್ಯಕ್ತಿ ಸಾವು

07:46 PM Jul 17, 2022 | Team Udayavani |

ಬಂಟ್ವಾಳ : ತೋಟದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವರು ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಕಾವಳಪಡೂರು ಗ್ರಾಮದಲ್ಲಿ ಜುಲೈ 16 ರಂದು ಸಂಜೆ ವೇಳೆ ನಡೆದಿದೆ.

Advertisement

ಬಂಟ್ವಾಳ ತಾಲೂಕಿನ ಕಾವಳಪಡೂರು ಬಾಳ್ತಬೈಲು ನಿವಾಸಿ ರಾಘವ ದೇವಾಡಿಗ (65) ಮೃತಪಟ್ಟ ವ್ಯಕ್ತಿ.

ದೇವಾಡಿಗ ಅವರು ಸ್ವಂತ ಅಡಿಕೆ ತೋಟದಲ್ಲಿರುವ ಬಾವಿಯ ಸುತ್ತಲೂ ಬಂದಿದ್ದ ಹುಲ್ಲು ತೆಗೆಯುವ ವೇಳೆ ಆಯತಪ್ಪಿ ಬಾವಿಗೆ ಬಿದ್ದಿರಬೇಕು ಎಂದು ಶಂಕಿಸಲಾಗಿದೆ.

ಮನೆಯಲ್ಲಿರುವ ಎಲ್ಲರೂ ಕೆಲಸಕ್ಕೆ ಹೋಗುತ್ತಿದ್ದು, ರಾಘವ ಅವರು ಒಬ್ಬರೇ ಮನೆಯಲ್ಲಿದ್ದರು. ಜುಲೈ 16 ರಂದು ಶನಿವಾರ ತೋಟದಲ್ಲಿರುವ ಬಾವಿಯ ಸುತ್ತಲಿನ ಹುಲ್ಲನ್ನು ಹಾರೆಯಿಂದ ತೆಗೆಯುತ್ತಿದ್ದನ್ನು ಸಂಜೆ 3.30. ಗಂಟೆಗೆ ನೆರೆಯ ಮನೆಯ ವ್ಯಕ್ತಿ ನೋಡಿದ್ದರು. ಆದರೆ ಸಂಜೆ ವೇಳೆ ಮಗ ಮನೆಗೆ ಬಂದು ನೋಡಿದಾಗ ತಂದೆ ಇರದಿದ್ದನ್ನು ಕಂಡು ಹುಡುಕಾಡಿದಾಗ ತೋಟದ ಬಾವಿಯ ಹತ್ತಿರ ಹಾರೆ ಇತ್ತು ಸಂಶಯದಿಂದ ಬಾವಿಯಲ್ಲಿ ಹುಡುಕಾಡಿದಾಗ ಮೃತದೇಹ ಪತ್ತೆಯಾಗಿದೆ ಎಂದು ಗ್ರಾಮಾಂತರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಸ್ಥಳಕ್ಕೆ ಗ್ರಾಮಾಂತರ ಎಸ್.ಐ.ಹರೀಶ್ ಬೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

Advertisement

ಇದನ್ನೂ ಓದಿ : ಸರಣಿ ನಿರ್ಣಾಯಕ ಪಂದ್ಯದಲ್ಲಿ 259 ರನ್ ಗಳಿಗೆ ಇಂಗ್ಲೆಂಡ್ ಆಲೌಟ್

Advertisement

Udayavani is now on Telegram. Click here to join our channel and stay updated with the latest news.

Next