Advertisement

ನೀರಿನಲ್ಲಿ ಮುಳುಗಿ ನಾಪತ್ತೆ ಪ್ರಕರಣ : ಮೂರನೇ ದಿನವೂ ಯುವಕನ ಸುಳಿವು ಪತ್ತೆಯಿಲ್ಲ

12:08 AM Jul 06, 2022 | Team Udayavani |

ಬಂಟ್ವಾಳ: ಸಜೀಪಪಡು ಗ್ರಾಮದ ತಲೆಮೊಗರುನಲ್ಲಿ ನೇತ್ರಾವತಿ ನದಿಯಲ್ಲಿ ಈಜಲು ತೆರಳಿದ್ದ ಐವರು ಯುವಕರ ಪೈಕಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿರುವ ಓರ್ವ ಯುವಕನಿಗಾಗಿ ಮೂರನೇ ದಿನವಾದ ಮಂಗಳವಾರವೂ ಹುಡುಕಾಟ ನಡೆಸಿದರೂ ಯುವಕನ ಸುಳಿವು ಪತ್ತೆಯಾಗಿಲ್ಲ.

Advertisement

ತಲೆಮೊಗರು ನಿವಾಸಿ ಅಶ್ವಿ‌ಥ್‌(19) ನೀರು ಪಾಲಾದ ಯುವಕನಾಗಿದ್ದು, ಆತ ಜು. 3ರಂದು ಸಂಬಂಧಿ ಸ್ನೇಹಿತರಾದ ನಾಲ್ವರ ಜತೆ ಈಜುವುದಕ್ಕಾಗಿ ನದಿಗೆ ಇಳಿದಿದ್ದನು. ಈ ವೇಳೆ ನಾಪತ್ತೆಯಾಗಿದ್ದಾನೆ.

ವಿಪರೀತ ಮಳೆಯ ಕಾರಣದಿಂದ ನದಿಯಲ್ಲಿ ನೀರನ ಮಟ್ಟ ಗಣನೀಯ ಏರಿಕೆಯಾಗಿದ್ದು, ಹೀಗಾಗಿ ಕಾರ್ಯಾಚರಣೆಗೆ ತೊಂದರೆಯಾಗಿದೆ. ಮಂಗಳವಾರ ಮಂಗಳೂರು ಅಗ್ನಿಶಾಮಕ ದಳ, ರಾಜ್ಯ ವಿಪತ್ತು ನಿರ್ವಹಣ ತಂಡದ ಜತೆಗೆ ಸ್ಥಳೀಯ ಈಜುಗಾರರು ಅಡ್ಯಾರ್‌ ಭಾಗದಲ್ಲಿ ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ : ಹೆಬ್ಬಾವನ್ನು ಕೊಂದು ಬಾಗಿಲಿಗೆ ನೇತು ಹಾಕಿದ ಪ್ರಕರಣ : ಇಬ್ಬರ ಬಂಧನ

Advertisement

Udayavani is now on Telegram. Click here to join our channel and stay updated with the latest news.

Next