Advertisement

Bantwal; ನೀರಿನಲ್ಲಿ ಮುಳುಗಿ ಯುವಕ ಸಾವು

12:06 AM Apr 01, 2024 | Team Udayavani |

ಬಂಟ್ವಾಳ: ಸಹೋದರ ಹಾಗೂ ಸ್ನೇಹಿತರ ಜತೆ ನೇತ್ರಾವತಿ ನದಿಯಲ್ಲಿ ಈಜಲು ತೆರಳಿದ್ದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ರವಿವಾರ ನರಿಕೊಂಬು ಗ್ರಾಮದ ಪೊಯಿತ್ತಾಜೆ ಯಲ್ಲಿ ನಡೆದಿದೆ.
ನರಿಕೊಂಬು ಗ್ರಾಮದ ಬಿಕ್ರೋಡಿ ನಿವಾಸಿ ಯೋಗೀಶ್‌ ಪೂಜಾರಿ ಅವರ ಪುತ್ರ ಅನುಷ್‌ (20) ಮೃತಪಟ್ಟವರು.

Advertisement

ಖಾಸಗಿ ಕಾಲೇಜು ಉದ್ಯೋಗಿ ಅವರು ಮೂಡುಬಿದಿರೆಯ ಖಾಸಗಿ ಕಾಲೇಜಿನಲ್ಲಿ ಉದ್ಯೋಗದಲ್ಲಿದ್ದು, ರವಿವಾರ ರಜಾ ದಿನವಾದ ಹಿನ್ನೆಲೆಯಲ್ಲಿ ಸಂಜೆ 4ರ ಸುಮಾರಿಗೆ ತಮ್ಮ ರೂಪೇಶ್‌ ಹಾಗೂ ಸ್ನೇಹಿತರಾದ ಕಿಶನ್‌, ಅನೀಶ್‌ ಜತೆ ನದಿಗೆ ಈಜಲು ಹೋಗಿದ್ದರು.

ನದಿಯಲ್ಲಿ ಸ್ನಾನ ಮಾಡುವ ವೇಳೆ ಅನುಷ್‌ ನೀರಿನಲ್ಲಿ ಮುಳುಗಿದ್ದು, ಜತೆಗಿದ್ದವರು ರಕ್ಷಿಸಲು ಪ್ರಯತ್ನ ಪಟ್ಟರೂ ಸಾಧ್ಯವಾಗಿರಲಿಲ್ಲ. ಬಳಿಕ ಬಂಟ್ವಾಳ ಅಗ್ನಿಶಾಮಕ ದಳದವರು ಆಗಮಿಸಿ ಮೃತದೇಹವನ್ನು ಮೇಲ ಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಂದೆ ಪೈಂಟರ್‌ ಯೋಗೀಶ್‌ ಪೂಜಾರಿ ದಂಪತಿಯ ಇಬ್ಬರು ಗಂಡು ಮಕ್ಕಳಲ್ಲಿ ಹಿರಿಯವರಾಗಿರುವ ಅನುಷ್‌ ಅವರು ಮೂಡುಬಿದಿರೆ ಕಾಲೇಜಿನಲ್ಲಿ ಎಲೆಕ್ಟ್ರಿಕಲ್‌ ಮೈನ್‌ ಟೈನ್‌ ಕೆಲಸ ನಿರ್ವಹಿಸುತ್ತಿದ್ದು, ರವಿವಾರ ಬೆಳಗ್ಗೆಯಷ್ಟೇ ರಜೆಯಲ್ಲಿ ಮನೆಗೆ ಆಗಮಿಸಿದ್ದರು. ಆತನ ತಂದೆ ಯೋಗೀಶ್‌ ಅವರು ಪೈಂಟರ್‌ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next