Advertisement

ಅಯ್ಯಪ್ಪ ವೃತಧಾರಿಗಳಿಗೆ ನಿಂದನೆ ಆರೋಪ: ಪ್ರಕರಣ ದಾಖಲು

05:59 PM Dec 28, 2022 | Team Udayavani |

ಬಂಟ್ವಾಳ: ಪಾಣೆಮಂಗಳೂರು ಸಮೀಪದ ಗೂಡಿನಬಳಿಯಲ್ಲಿ ಪಾರ್ಸೆಲ್‌ ನೀಡಲು ತೆರಳಿದ್ದ ಅಯ್ಯಪ್ಪ ವೃತಧಾರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪಿಯ ವಿರುದ್ಧ ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಗೂಡಿನಬಳಿ ನಿವಾಸಿ ಮೀನು ವ್ಯಾಪಾರಿ ಇಕ್ಬಾಲ್‌ ಆರೋಪಿಯಾಗಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಅಯ್ಯಪ್ಪ ವೃತಧಾರಿಯಾಗಿರುವ ಯಶ್ವಿ‌ತ್‌ ಅವರು ಸ್ನೇಹಿತನ ಜತೆ ರಿಕ್ಷಾ ಟೆಂಪೋದಲ್ಲಿ ಪಾರ್ಸೆಲ್‌ ನೀಡುವ ಸಂದರ್ಭ ಆರೋಪಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದು ನಮ್ಮ ಏರಿಯಾವಾಗಿದ್ದು, ಇಲ್ಲಿಗೆ ಹಿಂದೂಗಳು ಬರಬಾರದು ಎಂದು ಅಯ್ಯಪ್ಪ ವೃತಧಾರಿಗಳನ್ನು ನಿಂದಿಸಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next