Advertisement

ಬಂಟಕಲ್ಲು; ಬೃಹತ್ ಮಾವಿನ ಮರದ ಗೆಲ್ಲು ಮುರಿತ; ಸ್ವಲ್ಪದರಲ್ಲೆ ತಪ್ಪಿದ ಅನಾಹುತ

09:55 PM Feb 24, 2023 | Team Udayavani |

ಶಿರ್ವ: ಬಂಟಕಲ್ಲು ಪೇಟೆ ಬಸ್ಸು ನಿಲ್ದಾಣದ ಹಿಂದುಗಡೆ ಶುಕ್ರವಾರ ರಾತ್ರಿ 8.45 ರ ವೇಳೆ ಬೃಹತ್ ಮಾವಿನ ಮರದ ಗೆಲ್ಲು ಮುರಿದು ಬಿದ್ದು ವಿದ್ಯುತ್ ಕಡಿತಗೊಂಡಿದೆ.

Advertisement

2 ವಿದ್ಯುತ್ ಕಂಬಗಳು ವಾಲಿಕೊಂಡಿದ್ದು ಎಚ್.ಟಿ ಲೈನಿನ ವಿದ್ಯುತ್ ತಂತಿಗಳು ಕಡಿತಗೊಂಡಿವೆ. ದ್ವಿಚಕ್ರ ವಾಹನವನ್ನು ಅಂಗಡಿಯ ಎದುರು ನಿಲ್ಲಿಸಿ ಸಾಮಾನು ಖರೀದಿಸಲು ಅಂಗಡಿಗೆ ತೆರಳಿದ ಸಂಧರ್ಭ ಆ ವಾಹನದ ಮೇಲೆ ಕಡಿತಗೊಂಡ ವಿದ್ಯುತ್ ತಂತಿಗಳು ಹಾಗೂ ಅದರೊಂದಿಗಿನ ಭಾರವಾದ ಉಪಕರಣ ಬಿದ್ದಿದ್ದು ತಕ್ಷಣ ವಿದ್ಯುತ್ ಕಡಿತಗೊಂಡು ಸ್ವಲ್ಪದರಲ್ಲೆ ದೊಡ್ಡ ಅನಾಹುತ ತಪ್ಪಿದೆ.

ಬಸ್ಸು ನಿಲ್ದಾಣದ ಹಿಂದುಗಡೆ ನಿಲ್ಲಿಸಿದ್ದ ದ್ವಿಚಕ್ರವಾಹನಗಳಿಗೂ ಹಾನಿಯಾಗಿದೆ. ಮೆಸ್ಕಾಂ ಸಿಬಂದಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಬಂಟಕಲ್ಲು ಅಸುಪಾಸು ವಿದ್ಯುತ್ ಕಡಿತಗೊಂಡಿದೆ.

ಸ್ಥಳೀಯ ಗ್ರಾ. ಪಂ. ಸದಸ್ಯ ಕೆ ಆರ್ ಪಾಟ್ಕರ್ ಹಾಗೂ ಸ್ಥಳೀಯರು ಮೆಸ್ಕಾಂ ಸಿಬಂದಿಯವರಿಗೆ ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next