Advertisement

ಗಮನಿಸಿ: ಈ ನಾಲ್ಕು ದಿನ ಬ್ಯಾಂಕ್‌ ಸೇವೆ ಇರುವುದಿಲ್ಲ

09:34 AM Sep 16, 2019 | Team Udayavani |

ಹೊಸದಿಲ್ಲಿ: ಬ್ಯಾಂಕ್‌ ಮುಷ್ಕರ ಮತ್ತು ಸಾರ್ವಜನಿಕ ರಜೆಯ ಕಾರಣ ಸೆ.26ರಿಂದ 29ರವರೆಗೆ ನಾಲ್ಕು ದಿನಗಳ ಕಾಲ ಬ್ಯಾಂಕ್‌ ಗಳು ಕಾರ್ಯನಿರ್ವಹಿಸುವುದಿಲ್ಲ.

Advertisement

ದೇಶದ ಒಟ್ಟು 10 ಬ್ಯಾಂಕ್‌ ಗಳ ವಿಲೀನವನ್ನು ವಿರೋಧಿಸಿ ಅಖಿಲ ಭಾರತ ಬ್ಯಾಂಕ್‌ ಅಧಿಕಾರಿಗಳ ಒಕ್ಕೂಟ (ಎಐಬಿಒಸಿ), ಅಖಿಲ ಭಾರತ ಬ್ಯಾಂಕ್‌ ಅಧಿಕಾರಿಗಳ ಸಂಘ (ಎಐಬಿಒಎ), ಇಂಡಿಯನ್‌ ನ್ಯಾಷನಲ್‌ ಬ್ಯಾಂಕ್‌ ಅಧಿಕಾರಿಗಳ ಕಾಂಗ್ರೆಸ್‌ ( ಐಎನ್‌ಬಿಒಸಿ) ಬ್ಯಾಂಕ್‌ ಅಧಿಕಾರಿಗಳ ರಾಷ್ಟ್ರೀಯ ಸಂಸ್ಥೆ (ಎನ್‌ಇಬಿಒ)ಗಳು 26 ಮತ್ತು 27ರಂದು ಮುಷ್ಕರವನ್ನು ನಡೆಸಲು ನಿರ್ಧರಿಸಿದ್ದು,  ಬ್ಯಾಂಕಿನ ಸೇವೆ ಅಲಭ್ಯವಾಗಲಿದೆ.

ಇದರೊಂದಿಗೆ ಸೆ.28 ನಾಲ್ಕನೇ ಶನಿವಾರ ಮತ್ತು ಸೆ.29ರಂದು ಭಾನುವಾರವಾದ ಕಾರಣ ಬ್ಯಾಂಕಿಗೆ ರಜೆಇರಲಿದೆ. ನಾಲ್ಕುದಿನಗಳ ವರಗೂ ಬ್ಯಾಂಕ್‌ ಸೇವೆ ಲಭ್ಯವಿಲ್ಲದ ಕಾರಣ ಸಾರ್ವಜನಿಕರು ತಮ್ಮ ಬ್ಯಾಂಕ್‌ ವ್ಯವಹಾರವನ್ನು ಆ ದಿನಾಂಕದ ಒಳಗೆ ಇಲ್ಲವೇ ಬಳಿಕ ನಿರ್ವಹಿಸಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next