Advertisement

ಖಾತೆಗೆ ಕನ್ನ ಹಾಕಿದರೆ ಬ್ಯಾಂಕ್‌ ಹೊಣೆ: ಕೇರಳ ಹೈಕೋರ್ಟ್‌

12:30 AM Feb 07, 2019 | |

ಕೊಚ್ಚಿ: ಗ್ರಾಹಕರ ಖಾತೆಗಳಿಂದ ಅನಧಿಕೃತವಾಗಿ ಇತರರು ಹಣ ವಿಥ್‌ಡ್ರಾ ಮಾಡಿದರೆ ಅಥವಾ ಹಣ ಕಳೆದು ಕೊಂಡರೆ ಬ್ಯಾಂಕ್‌ಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ ಎಂದು ಕೇರಳ ಹೈಕೋರ್ಟ್‌ ಹೇಳಿದೆ. ಖಾತೆಗಳಿಂದ ಹಣ ಡ್ರಾ ಆಗುವ ಬಗ್ಗೆ ಎಸ್‌ಎಂಎಸ್‌ ಮೂಲಕ ನೀಡುವ ಎಚ್ಚರಿಕೆಯ ಸಂದೇಶಗಳಿಗೆ ಗ್ರಾಹಕರು ಪ್ರತಿಕ್ರಿಯೆ ನೀಡದಿದ್ದರೂ, ಅವುಗಳಿಗೆ ಹೊಣೆಗಾರಿಕೆಗೆ ಇದೆ ಎಂದು ನ್ಯಾ| ಪಿ.ಬಿ. ಸುರೇಶ್‌ ಕುಮಾರ್‌ ನೇತೃತ್ವದ ನ್ಯಾಯಪೀಠ ಬುಧವಾರ ಈ ತೀರ್ಪು ನೀಡಿದೆ.  ಗ್ರಾಹಕರ ಹೊಣೆಗಾರಿಕೆ ಯನ್ನು ನಿರ್ಧರಿಸಲು ಎಸ್‌ಎಂಎಸ್‌ ಎಚ್ಚರಿಕೆಯೊಂದೇ ಆಧಾರವಾಗಿರಬಾರದು. ಅವುಗಳನ್ನು  ನಿಯಮಿತವಾಗಿ ಪರೀಕ್ಷಿಸುವ ಅಭ್ಯಾಸದಲ್ಲಿಲ್ಲದ ಖಾತೆದಾರರೂ ಇರುತ್ತಾರೆ ಎಂದು ನ್ಯಾಯಪೀಠ ಹೇಳಿದೆ. 

Advertisement

ಸುರಕ್ಷಿತವಾಗಿ ಇಲೆಕ್ಟ್ರಾನಿಕ್‌ ಮಾಧ್ಯಮದಲ್ಲಿ ವಹಿವಾಟು ನಡೆಸಲು ಅನುಕೂಲ ಮಾಡುವ ಹೊಣೆಯೂ ಇದೆ ಎಂದಿದೆ. ಗ್ರಾಹಕರೊಬ್ಬರಿಗೆ 2.4 ಲಕ್ಷ ರೂ. ನೀಡುವಂತೆ ಕೆಳ ನ್ಯಾಯಾಲಯ ನೀಡಿದ್ದ ತೀರ್ಪಿನ ವಿರುದ್ಧ ಬ್ಯಾಂಕೊಂದು ಸಲ್ಲಿಸಿದ್ದ  ಮನವಿ ತಿರಸ್ಕರಿಸಿ ಹೈಕೋರ್ಟ್‌ ಈ ತೀರ್ಪು ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next